Advertisement

ಪ.ಪೂ. ಶಿಕ್ಷಣ ಇಲಾಖೆ ಸರ್ಕಾರದ ಅಧೀನವೇ?,ಸ್ಪಷ್ಟಪಡಿಸಿ: ಸಿಎಂಗೆ ಬಿಜೆಪಿ ಶಾಸಕ

02:27 PM Nov 17, 2021 | Team Udayavani |

ವಿಜಯಪುರ : ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಅವೈಜ್ಞಾನಿಕ ನಿರ್ಧಾರ ಹೊರ ಬೀಳುತ್ತಿವೆ. ಇಲಾಖೆಯನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳಲು ಕೂಡಲೇ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಂಎಲ್ ಸಿ ಅರುಣ ಶಹಪೂರ ಆಗ್ರಹಿಸಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ತಜ್ಞರು, ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘದ ಪ್ರತಿನಿಧಿಗಳ ಸಮತಿ ಸಭೆ ಕರೆದು ಚರ್ಚಿಸಬೇಕು. ಈ ಆತುರದ ನಿರ್ಧಾರದ ವಿರುದ್ಧ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೋವಿಡ್ ಮೂರನೇ ಅಲೆಯ ಭೀತಿಯ ನೆಲದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನ.12 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ನ.29 ರಿಂದ ಮಧ್ಯಂತರ ಪರೀಕ್ಷೆ ನಡೆಸಲು ನಿರ್ಧಿರಿಸಿರುವುದು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪು.ಪೂ. ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ.ನವೆಂಬರ್ 29 ಕ್ಕೆ ನಡೆಸಲು ನಿರ್ಧರಿಸಿರುವ ಪ.ಪೂ.ಶಿ. ಇಲಾಖೆಯ ಕ್ರಮ ಆತುರದ ನಿರ್ಧಾರ. ಸರ್ಕಾರದ ಗಮನಕ್ಕೂ ತಾರದೇ ಏಕಪಕ್ಷೀಯವಾಗಿ ಮಧ್ಯಂತರ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಅವೈಜ್ಞಾನಿಕ ನಿರ್ಧಾರದ ಸರಿಯಲ್ಲ ಎಂಬ ನಮ್ಮ ಸಲಹೆಗೂ ಅಧಿಕಾರಿಗಳು ಸ್ಪಂದಿಸದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ ಎಂದು ಆಗ್ರಹಿಸಿದರು.

Advertisement

ಪಠ್ಯ ಕ್ರಮದ ಬೋಧನೆ ಮುಗಿದಿಲ್ಲ, ಪ್ರಶ್ನೆ ಪತ್ರಿಕೆ ಸಿದ್ಧತೆ, ಮೌಲ್ಯಮಾಪನ, ಪೂರ್ವ ಸಿದ್ಧತೆ ಇಲ್ಲ, ಉಪನ್ಯಾಸಕರು, ತಜ್ಞರೊಂದಿಗೆ ಚರ್ಚಿಸದೇ ಮಧ್ಯಂತರ ಪರೀಕ್ಷೆ ಘೋಷಣೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಪ.ಪೂ.ಶಿಕ್ಷಣ ಇಲಾಖೆ ಅಧಿಕಾರಿಗಳ ವರ್ತನೆ, ನಡವಳಿಕೆಗಳು ಸರ್ವಾಧಿಕಾರಿ ಧೋರಣೆಯಿಂದ ಕೂಡಿವೆ. ಈ ಇಲಾಖೆ ಕರ್ನಾಟಕ ಸರ್ಕಾರದ ಅಧೀನ‌ ಇಲಾಖೆಯೋ ಅಥವಾ ಸ್ವಾಯತ್ತ ಸಂಸ್ಥೆಯೋ ಎಂಬುದನ್ನು ಸರ್ಕಾರ, ಮುಖ್ಯಮಂತ್ರಿಗಳು, ಶಿಕ್ಷಣ ಇಲಾಖೆ ಸಚಿವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಡವಾಗಿ ಕಾಲೇಜುಗಳು ಆರಂಭಗೊಂಡಿವೆ. ಕೊರತೆ ಇರುವ ಉಪನ್ಯಾಸಕರ ನೇಮಕವಾಗಿಲ್ಲ, ಅತಿಥಿ ಉಪನ್ಯಾಸಕರ ನಿಯೋಜನೆಯೂ ಆಗಿಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಇರಿಸಿಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆ ಮಧ್ಯಂತರ ಪರೀಕ್ಷೆ ನಡೆಸುವ ನಿರ್ಧಾರ ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟ ಆಡಲು ಮುಂದಾದುದಕ್ಕೆ ಸಾಕ್ಷಿ ಎಂದು ಕಿಡಿ ಕಾರಿದರು.

ಪದವಿ ಪೂರ್ವ ದ್ವಿತೀಯ ವರ್ಷದ ಶಿಕ್ಷಣ ಮಕ್ಕಳ ಶೈಕ್ಷಣಿಕ ಜೀವನ ಮಹತ್ವದ ಘಟ್ಟ. ಇಂಥ ವಿಷಯದಲ್ಲಿ ಇಲಾಖೆಯ ಅಧಿಕಾರಿಗಳು ಸರ್ವಾಧಿಕಾರಿ ವರ್ತನೆ ಮೂಲಕ ಏಕಪಕ್ಷೀಯ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹರಿಹಾಯ್ದರು.

ಕಳೆದ 10 ವರ್ಷಗಳಲ್ಲಿ ಪದವಿ ಪೂರ್ವ ಇಲಾಖೆಯಲ್ಲಿ 18 ನಿರ್ದೇಶಕರು ಬದಲಾಗಿದ್ದಾರೆ. ಇದು ಸದರಿ ಇಲಾಖೆ ಎಷ್ಟು ಅಧೋಗತಿಗೆ ತಲುಪಿದೆ ಎಂಬುದಕ್ಕೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು.

ಕೂಡಲೇ ಸರ್ಕಾರ, ಮುಖ್ಯಮಂತ್ರಿ, ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಸಚಿವರು ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸುವ ನಿರ್ಧಾರ ತಡರದು, ಅಧಿಕಾರಿಗಳ ಅವೈಜ್ಞಾನಿಕ ನಡೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪ.ಪೂ. ಕಾಲೇಜು ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಗೌರಿ,ಪ.ಪೂ. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಎಂ.ಬಿ.ಹೆಬ್ಬಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next