Advertisement

ಸರವಣ ರೆಸ್ಟೋರೆಂಟ್ ಮಾಲೀಕ ಶರಣು

01:47 AM Jul 10, 2019 | mahesh |

ನವದೆಹಲಿ: ತಮಿಳುನಾಡಿನ ಸರವಣ ರೆಸ್ಟೋರೆಂಟ್‌ಗಳ ಮಾಲೀಕ ಪಿ. ರಾಜ ಗೋಪಾಲ್ರ ಜೀವಾವಧಿ ಶಿಕ್ಷೆಯ ವಿಚಾ ರಣೆ ಮುಂದೂಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ. ಮಂಗಳವಾರ, ಆಕ್ಸಿಜನ್‌ ಮಾಸ್ಕ್ ಧರಿಸಿ ಆ್ಯಂಬುಲೆನ್ಸ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ಮುಂದೆ ಹಾಜರಾದ ರಾಜಗೋಪಾಲ್, ವಿಚಾರಣೆ ಮುಂದೂಡುವಂತೆ ಸುಪ್ರೀಂ ಕೋರ್ಟನ್ನು ಪ್ರಾರ್ಥಿಸಿದರು. ಆದರೆ, ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌.ವಿ. ರಮಣ ತಳ್ಳಿಹಾಕಿದರು. 2001ರಲ್ಲಿ ತನ್ನ ರೆಸ್ಟೋರೆಂಟ್ ಉದ್ಯೋಗಿಯೊಬ್ಬರ ಪತ್ನಿಯನ್ನು ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಆ ಉದ್ಯೋಗಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜು. 7ರಂದು ಅವರು ನ್ಯಾಯಾಲಯಕ್ಕೆ ಶರಣಾಗುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next