Advertisement

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

02:19 PM Apr 29, 2024 | Team Udayavani |

ಪಡುಬಿದ್ರಿ: ತಡೆರಹಿತ ಬಸ್ ಚಾಲಕ ತನ್ನ ಕಾರನ್ನು ಓವರ್ ಟೇಕ್ ಮಾಡಿದ್ದರ ವಿರುದ್ಧ ಕೆಂಡವಾದ ಖಾಸಗಿ ಕಾರಿನ ವ್ಯಕ್ತಿಯೋರ್ವ ಸೋಮವಾರ ಬೆಳಿಗ್ಗೆ ಬಸ್ ಚಾಲಕನ ಮೇಲೆ ಬಸ್ಸಿನೊಳಗೆ ಹಲ್ಲೆ ನಡೆಸಿದ ಘಟನೆಯು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ.

Advertisement

ಮೂಲ್ಕಿಯ ಇಸ್ಮಾಯಿಲ್ ಅತೀಕ್ (41) ಆರೋಪಿಯಾಗಿದ್ದು, ಬಸ್ ಚಾಲಕನನ್ನು ಶೈಲೇಂದ್ರ ಯಾನೆ ಶೈಲು ಎಂದು ಗುರುತಿಸಲಾಗಿದೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತಾದ ಪ್ರಕರಣವು ದಾಖಲಾಗಿದೆ. ಈ ವೇಳೆ ಬಸ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ವಿರುದ್ಧವೂ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ.

ಸುಳ್ಳು ಸುದ್ದಿ ಹಬ್ಬಿದ ಪತ್ರಿಕಾ ವೆಬ್ ಸೈಟ್ ವಿರುದ್ಧವೂ ಪ್ರಕರಣ

ಪಡುಬಿದ್ರಿಯು ಉದ್ವಿಗ್ನ ಎಂಬಿತ್ಯಾದಿ ಸುಳ್ಳು ಸುದ್ದಿಗಳ ಹಬ್ಬಿಸಿ, ಪಡುಬಿದ್ರಿಯಲ್ಲಿ ಮಾಸ್ಟರ್ ಎಕ್ಸ್ ಪ್ರೆಸ್ ಬಸ್ ಚಾಲಕನಿಗೆ ಚೂರಿ ಇರಿತವಾಗಿರುವುದಾಗಿಯೂ ವಾಟ್ಸಪ್ಪ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಪತ್ರಿಕಾ ವೆಬ್ ಸೈಟ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂದಕ್ಕೆ ಈ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಡುಬಿದ್ರಿ ಪಿಎಸ್ ಐ ಪ್ರಸನ್ನ ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next