Advertisement

“ಬಿಎಸ್‌ವೈ ಮೇಲೆ ಅತಿ ನಿಯಂತ್ರಣ ಸರಿಯಲ್ಲ’

11:26 PM Aug 25, 2019 | Lakshmi GovindaRaj |

ದಾವಣಗೆರೆ: ಬಿಜೆಪಿ ಹೈಕಮಾಂಡ್‌ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅತಿಯಾಗಿ ನಿಯಂತ್ರಣ ಮಾಡುವುದು ಸರಿ ಅಲ್ಲ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ| ಅಭಿನವ ಅನ್ನದಾನ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ದೇವರಾಜ ಅರಸು ಬಡಾವಣೆಯ ಅನ್ನದಾನೇಶ್ವರ ಶಾಖಾ ಮಠದಲ್ಲಿ ಶ್ರೀಗುರು ಅನ್ನದಾನ ಮಹಾಶಿವಯೋಗಿಗಳವರ 42ನೇ ಪುಣ್ಯಾರಾಧನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಸಿಎಂಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಬಿಟ್ಟರೆ ಮೂರೂವರೆ ವರ್ಷದಲ್ಲಿ ರಾಜ್ಯದ ಚಿತ್ರಣ ಬದಲಾ ಯಿಸಿ, ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಶ್ರಮಿಸು ತ್ತಾರೆ. ಅಲ್ಲದೆ, ರಾಜ್ಯವನ್ನು ಅಭಿ ವೃದ್ಧಿಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಆರ್‌ಎಸ್‌ಎಸ್‌ನವರು ಪ್ರತಿ ವಿಷಯದಲ್ಲೂ ಅನ ಧಿ ಕೃತವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಒಳ್ಳೆಯದಲ್ಲ. ಬಿಜೆಪಿ ಹೈಕಮಾಂಡ್‌ ಸಹ ಆರ್‌ಎಸ್‌ಎಸ್‌ನವರ ಮಾತನ್ನು ಎಷ್ಟು ಕೇಳಬೇಕೋ ಅಷ್ಟನ್ನು ಮಾತ್ರ ಕೇಳಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next