Advertisement

ವಂದೇ ಭಾರತ್‌ ಮೂಲಕ 5 ಲಕ್ಷ ಮಂದಿ ದೇಶಕ್ಕೆ ವಾಪಸ್‌

09:33 PM Jul 04, 2020 | Sriram |

ನವದೆಹಲಿ: ಕೋವಿಡ್‌-19 ಹಿನ್ನೆಲೆಯಲ್ಲಿ ಜಗತ್ತಿನ 137 ದೇಶಗಳಲ್ಲಿ ಅತಂತ್ರರಾಗಿದ್ದ 5 ಲಕ್ಷಕ್ಕೂ ಅಧಿಕ ಭಾರತೀಯರನ್ನು ವಂದೇ ಭಾರತ್‌ ಮಿಷನ್‌ ಯೋಜನೆಯಡಿ ದೇಶಕ್ಕೆ ಕರೆತರಲಾಗಿದೆ.

Advertisement

94,085 ಮಂದಿಯನ್ನು ಮರಳಿ ಕರೆಸಿಕೊಂಡ ಕೇರಳ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ!

ಆರಂಭದಲ್ಲಿ ನಮ್ಮ ಗುರಿಯಿದ್ದದ್ದು ಕೇವಲ 2 ಲಕ್ಷ ಮಂದಿಯನ್ನು ಕರೆ ತರುವುದು.

ಈಗ 5 ಲಕ್ಷ ಮಂದಿಯನ್ನು ಕರೆ ತರಲಾಗಿದೆ. ಇದು ಹೆಮ್ಮೆಯ ಸಾಧನೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ.

ಮೂರು ಹಂತದಲ್ಲಿ ಈ ಮಿಷನ್‌ ಜಾರಿಯಾಗಿತ್ತು. ಮೇ 7ರಿಂದ 15, ಮೇ 17ರಿಂದ ಜೂ.10, ಜೂ.11ರಿಂದ ಜು.2ರವರೆಗೆ ಭಾರತೀಯರನ್ನು ಮರಳಿ ದೇಶಕ್ಕೆ ಕರೆ ತರಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next