Advertisement

ದೇಶದಲ್ಲಿ 2.7 ಲಕ್ಷ ದಾಟಿದ ಕೋವಿಡ್-19 ಪ್ರಕರಣ: ಮಹಾರಾಷ್ಟ್ರದಲ್ಲಿ 94 ಸಾವಿರ ಸೋಂಕಿತರು

01:58 PM Jun 11, 2020 | Mithun PG |

ಬೆಂಗಳೂರು: ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ, ಕೊಲ್ಕತ್ತಾ ಮತ್ತು ಬೆಂಗಳೂರಿನ ಆರು ನಗರಗಳಲ್ಲಿ ಕೋವಿಡ್- 19 ಅನ್ನು ಎದುರಿಸಲು ಕೈಗೊಳ್ಳುತ್ತಿರುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪರಿಶೀಲಿಸಲು ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡಲು ಕೇಂದ್ರ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಏತನ್ಮಧ್ಯೆ ದೇಶದಲ್ಲಿ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆ , ಸಕ್ರೀಯ ಪ್ರಕರಣಗಳಿಗಿಂತಲೂ ಹೆಚ್ಚಿದೆ ಎಂದ ಆರೋಗ್ಯ ಸಚಿವಾಲಯ ತಿಳಿಸಿದೆ. ಬುಧವಾರ( 10-6-2020) ಒಂದೇ ದಿನ 10,000 ಹೊಸ ಪ್ರಕರಣಗಳು ಕಂಡುಬಂದಿದ್ದು ಒಟ್ಟಾರೆ ಸೋಂಕಿತರ ಪ್ರಮಾಣ  2.7 ಲಕ್ಷ ದಾಟಿದೆ. ಸಾವಿನ ಸಂಖ್ಯೆ ಕೂಡ 7,745 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಮುಂಬೈಯಲ್ಲಿ ಕೋವಿಡ್ -19 ಪ್ರಕರಣಗಳು 52,000 ದಾಟಿದ್ದು, ಒಟ್ಟಾರೆ ಮಹಾರಾಷ್ಟ್ರ ರಾಜ್ಯದಲ್ಲಿ 94,000 ಜನರಿಗೆ ವೈರಾಣು ತಗುಲಿದೆ. ಈವರೆಗೂ ಸುಮಾರು 3,438 ಜನರು ಇಲ್ಲಿ ಮೃತರಾಗಿದ್ದಾರೆಂದು ವರದಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  31,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅಹಮದಾಬಾದ್‌ನಲ್ಲಿ ಸುಮಾರು 15,000 ಪ್ರಕರಣಗಳು ಮತ್ತು ಚೆನ್ನೈನಲ್ಲಿ 22,000 ಪ್ರಕರಣಗಳು ದಾಖಲಾಗಿವೆ.

ಜಾಗತಿಕವಾಗಿ 7 ಮಿಲಿಯನ್ ಜನರಿಗೆ ಈ ಮಹಾಮಾರಿ ಕೋವಿಡ್ ತಗುಲಿದ್ದು, 4 ಲಕ್ಷಕ್ಕಿಂತ ಹೆಚ್ಚು ಜನರು ಮೃತರಾಗಿದ್ದಾರೆ.  ಅಮೆರಿಕಾವೊಂದರಲ್ಲೇ 20 ಲಕ್ಷ ಸೋಂಕಿತರಿದ್ದು, 1.15 ಲಕ್ಷ ಜನರು ಮೃತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next