Advertisement

ಪ್ರಸಕ್ತ ವರ್ಷ ಮಳೆಗೆ 1,600 ಬಲಿ

12:32 AM Oct 02, 2019 | Team Udayavani |

ಹೊಸದಿಲ್ಲಿ: ಕಳೆದ 25 ವರ್ಷಗಳಿಗೆ ಹೋಲಿಸಿದರೆ ದೇಶವು ಈ ಬಾರಿ ಅತ್ಯಧಿಕ ಮಳೆಯನ್ನು ಕಂಡಿದ್ದು, ಜೂನ್‌ನಿಂದ ಈವರೆಗೆ ದೇಶಾದ್ಯಂತ 1600ಕ್ಕೂ ಹೆಚ್ಚು ಮಂದಿ ಮಳೆ, ಪ್ರವಾಹ ಸಂಬಂಧಿ ಘಟನೆಗಳಿಗೆ ಬಲಿಯಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶ ತಿಳಿಸಿದೆ. 50 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸಕ್ತ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಗೆ ಶೇ.10ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಬಿಹಾರ, ಉತ್ತರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಲೂ ಮಳೆಯಾಗುತ್ತಿದ್ದು, ಪ್ರಸಕ್ತ ಮಳೆಗಾಲದ ಅವಧಿ ಅಕ್ಟೋಬರ್‌ವರೆಗೂ ವಿಸ್ತರಿಸಿದೆ ಎಂದೂ ದತ್ತಾಂಶಗಳು ಹೇಳಿವೆ. ಕಳೆದ ಶುಕ್ರವಾರದಿಂದ ಈವರೆಗೆ ಬಿಹಾರ ಮತ್ತು ಉ.ಪ್ರದೇಶದಲ್ಲಿ 144 ಮಂದಿ ಬಲಿಯಾಗಿ ದ್ದಾರೆ. ಈ ರಾಜ್ಯಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯ ಚುರುಕುಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next