Advertisement

ಹೊರಗುತ್ತಿಗೆ ನೌಕರರ ಪ್ರತಿಭಟನೆ

03:58 PM Oct 15, 2019 | Team Udayavani |

ಹೂವಿನಹಡಗಲಿ: ಪಟ್ಟಣದಲ್ಲಿ ಸಣ್ಣ ಏತನೀರಾವರಿ ಯೋಜನೆ ಹಾಗೂ ನಿರ್ವಾಹಕರು, ನೀರು ಗಂಟಿ, ಹೊರ ಗುತ್ತಿಗೆದಾರ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್‌.ಎಂ. ಕೊಟ್ರೇಶ್‌ ಕಳೆದ 25 ವರ್ಷಗಳಿಂದಲೂ ನೀರು ಗಂಟಿಗಳು ಯಾವುದೇ ಸೇವಾ ಭದ್ರತೆ ಇಲ್ಲದೆ ಅಲ್ಪ ಸಂಬಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕೂಡಲೇ ಇಪಿಎಸ್‌, ಇವಿಎಸ್‌ಪಿ ಸೌಲಭ್ಯ ಒದಗಿಸಬೇಕು. ಅಲ್ಲದೇ ಹೆಚ್ಚುವರಿ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್‌. ರುದ್ರಪ್ಪ, ಖಜಾಂಜಿ ಕೆ. ಭೀಮಪ್ಪ, ಕಾರ್ಯದರ್ಶಿ ಕೆ. ಷಣ್ಮೂಖ, ಸಹಕಾರ್ಯದರ್ಶಿ ಟಿ. ಹನುಮಂತಪ್ಪ ಮತ್ತಿತರರಿದ್ದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಆಭಿಯಂತರ ಪ್ರಭಾಕರರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next