Advertisement

ಹೊರ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

04:58 PM Jul 20, 2019 | Team Udayavani |

ಅಂಕೋಲಾ: ತಾಲೂಕಾಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗೌರವಧನ ನೀಡದೆ ಸೇವೆಯಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರು ಶುಕ್ರವಾರ ತಮ್ಮ ಬೇಡಿಕೆ ಇಡೆರಿಸುವಂತೆ ಧರಣಿ ನಡೆಸಿದರು.

Advertisement

ಹೊರಗುತ್ತಿಗೆ ಕಾರ್ಮಿಕ ಸಂಘದ ರವಿಕಲಾ ಗುರವ ಮಾತನಾಡಿ ನಾವು ಕಳೆದ ಮೂರು ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ. ನಮಗೆ ಎಂಟು ತಿಂಗಳಿಂದ ಯಾವುದೇ ಗೌರವಧನ ನೀಡಿಲ್ಲ. ನಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ನಮಗೆ ಕೆಲಸ ಕೊಡಿ. ಏಕಾಏಕಿ ಹೊರ ದಬ್ಬಿದರೆ ನಾವೆಲ್ಲಿ ಹೋಗಬೇಕು. ನಮಗೆ ಜೀವನ ನಡೆಸುವುದು ಕಷ್ಟವಾಗಿದೆ. ನಮ್ಮ ಹೋರಾಟ ಬೇಡಿಕೆ ಈಡೇರುವವರೆಗೆ ಮುಂದುವರಿಯಲಿದೆ ಎಂದು ಹೇಳಿದರು.

ಸ್ಥಳಕ್ಕಾಗಮಿಸಿದ ಡಿಎಚ್ಒ ಡಾ| ಅಶೋಕಕುಮಾರ ಮಾತನಾಡಿ ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ನೀವೆಲ್ಲರೂ ನಮ್ಮ ಕುಟುಂಬದವರರು ಇದ್ದ ಹಾಗೆ ನಮ್ಮ ಜೊತೆ ಕೆಲಸ ಮಾಡುತ್ತಿದ್ದೀರಿ. ಜು.30ರವರೆಗೆ ತಾಳ್ಮೆಯಿಂದಿರಿ. ನಿಮ್ಮ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮೂರು ತಿಂಗಳ ಗೌರವಧನ ಕೊಡಿಸಲು ಪ್ರಯತ್ನಿಸುತ್ತೇನೆ. ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಈ ಮೊದಲು ನೇಮಕವಾಗಿರುವ ಎಲ್ಲರಿಗೂ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದರು.

ನಿತ್ಯಾನಂದ ನಾಯ್ಕ, ಶೈಲಾ ಬಂಡಾರಿ, ಮಹೇಶ ನಾಯ್ಕ, ದಿವ್ಯಾ ನಾಯ್ಕ, ನೀಲಾ ಆಗೇರ, ಅಶ್ವಿ‌ನಿ ಹರಿಜನ್‌, ರಾಮಚಂದ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next