Advertisement

Hijab: ಹಿಜಾಬ್‌ ಇಲ್ಲದ ಸಮವಸ್ತ್ರಕ್ಕೆ ಆಕ್ರೋಶ

08:31 PM Aug 12, 2023 | Team Udayavani |

ತಿರುವನಂತಪುರ: ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಶಾಲೆಗಳಲ್ಲಿ ಹೊಸ ಸಮವಸ್ತ್ರ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರಲ್ಲಿ ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಲು ಅವಕಾಶ ಮಾಡಿಕೊಡಲಾಗಿಲ್ಲ.

Advertisement

ಈ ಬಗ್ಗೆ ಮಾಜಿ ಸಂಸದ, ಕಾಂಗ್ರೆಸ್‌ ನಾಯಕ ಹಮುªಲ್ಲಾಹ ಸಯೀದ್‌ರನ್ನು ಕೆರಳಿಸಿದೆ. ಆಡಳಿತ ಅನಗತ್ಯವಾಗಿ ದ್ವೀಪದಲ್ಲಿ ವಿವಾದವೆಬ್ಬಿಸುತ್ತಿದೆ, ಹೊಸ ಸಮವಸ್ತ್ರ ನೀತಿಯಲ್ಲಿ ಹಿಜಾಬ್‌ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದು ದ್ವೀಪವಾಸಿಗಳ ಆಂತರಿಕ ಸಂಸ್ಕೃತಿ, ಜೀವನಪದ್ಧತಿಯನ್ನು ಹಾಳು ಮಾಡುವ ಉದ್ದೇಶ ಹೊಂದಿದೆ. ಅನಗತ್ಯವಾಗಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ಸರಿಪಡಿಸದಿದ್ದರೆ ಕಾಂಗ್ರೆಸ್‌ ದೊಡ್ಡಮಟ್ಟದ ಹೋರಾಟ ತೆಗೆದುಕೊಳ್ಳುತ್ತದೆ, ಶಾಲೆಗಳನ್ನು ಬಹಿಷ್ಕರಿಸುತ್ತದೆ ಎಂದು ಹಮುªಲ್ಲಾಹ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next