Advertisement

ಶಾಸಕ ಸತೀಶ ಬೆಂಬಲಿಗರ ಆಕ್ರೋಶ 

06:15 AM Sep 08, 2018 | Team Udayavani |

ಬೆಳಗಾವಿ: ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಬಣ ಮೇಲುಗೈ ಸಾಧಿಸುತ್ತಿದ್ದಂತೆ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಲಕ್ಷ್ಮೀ ಹೆಬ್ಟಾಳಕರ ಹಾಗೂ ಸತೀಶ ಜಾರಕಿಹೊಳಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಹೊರ ಬರುತ್ತಿದ್ದಂತೆ ಸತೀಶ ಬೆಂಬಲಿಗರು ಹೆಬ್ಟಾಳ್ಕರ್‌ ವಿರುದ್ಧ ಟೀಕಾ ಪ್ರಹಾರ ನಡೆಸಿ, “ಸತೀಶ ಅವರಿಗೆ ಚುನಾವಣೆಯಲ್ಲಿ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಕೆಲವರಿಗೆ ತಕ್ಕ ಪಾಠ ಕಲಿಸಲಾಗುವುದು. ಹೆಬ್ಟಾಳ್ಕರ್‌ ವಾಮಮಾರ್ಗ ಹಿಡಿದು ಮೇಲುಗೈ ಸಾಧಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡುತ್ತಿರುವ ಜಾರಕಿಹೊಳಿ ಅವರಿಗೆ ಹಿನ್ನಡೆ ಆಗಿದ್ದು ನೋವು ತಂದಿದೆ ಎಂದು ಮಹಿಳಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪ್ರವಾಸಿ ಮಂದಿರದ ಹೊರಗೆ ಬಂದ ಮುಖಂಡರು, ಇನ್ನುಳಿದ ಬೆಂಬಲಿಗರನ್ನು ಕರೆದುಕೊಂಡು ಒಳಗೆ ಹೋದರು. ಈ ರೀತಿ ಮಾಧ್ಯಮದ ಎದುರು ಮಾತನಾಡಬಾರದು. ತಮ್ಮ ಅಸಮಾಧಾನ ಏನಿದ್ದರೂ ಮುಖಂಡರೊಂದಿಗೆ ಚರ್ಚಿಸಿ ಎಂದು ಸಮಜಾಯಿಷಿ ನೀಡಿ ಸತೀಶ ಜಾರಕಿಹೊಳಿ ಇರುವ ಕಡೆ ಕರೆದುಕೊಂಡು ಹೋದರು.

Advertisement

Udayavani is now on Telegram. Click here to join our channel and stay updated with the latest news.

Next