Advertisement
ಕಾಸರಗೋಡು ಸ್ತಬ್ಧ: ತ್ರಿಶ್ಶೂರ್ನ ಕೊಡುಂ ಗಲ್ಲೂರ್, ಮಾಲಾ ಮತ್ತು ಇತರ ಸ್ಥಳಗಳಲ್ಲಿ ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ತಿರುವನಂತಪುರ, ಕೊಲ್ಲಂ, ಕಾಸರಗೋಡು ಸೇರಿದಂತೆ 14 ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅಯ್ಯಪ್ಪ ಭಕ್ತರು ಬಲವಂತವಾಗಿ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದ್ದಾರೆ. ಕಾಸರ ಗೋಡು ಸಂಪೂರ್ಣ ಬಂದ್ ಆಗಿದೆ.
Related Articles
Advertisement
ನಮ್ಮನ್ನು ಯಾರೂ ತಡೆಯಲಿಲ್ಲ: ದೇಗುಲ ಪ್ರವೇಶದ ಬಗ್ಗೆ ಮಾತನಾಡಿದ ಕನಕ ದುರ್ಗಾ, ಮಧ್ಯರಾತ್ರಿಯೇ ನಾವಿಬ್ಬರೂ ಪಂಪಾ ನದಿ ತೀರಕ್ಕೆ ಬಂದಿದ್ದೆವು. ಬಳಿಕ ಠಾಣೆಗೆ ತೆರಳಿದೆವು. ಪೊಲೀಸರ ರಕ್ಷಣೆ ಇಲ್ಲದೆ ದೇಗುಲದತ್ತ ನಡೆದುಕೊಂಡು ಹೊÃ ಟೆವು. 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ಕೊಂಡು ಸನ್ನಿಧಾನಂನತ್ತ ತೆರಳಿದೆವು. ಆಗ ಕೇವಲ ಭಕ್ತರು ಮಾತ್ರ ಇದ್ದರು. ನಮ್ಮನ್ನು ಯಾರೂ ತಡೆದಿಲ್ಲ ಎಂದು ಹೇಳಿ ದ್ದಾರೆ. ಇದೇ ವೇಳೆ ನ್ಯಾಯವಾದಿ ಬಿಂದು ಮಾತ ನಾಡಿ, 18 ಮೆಟ್ಟಿಲುಗಳನ್ನೇರದೆ ದೇಗುಲ ಪ್ರವೇಶ ಮಾಡಿದ್ದಾಗಿ ತಿಳಿಸಿದ್ದಾರೆ.
ಭದ್ರತೆ ನೀಡಿದ್ದು ಆರು ಪೊಲೀಸರುಪಟ್ಟಣಂತಿಟ್ಟ ಜಿಲ್ಲೆಯ ಆಯ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಮಹಿಳೆಯರ ಭೇಟಿಯ ಬಗ್ಗೆ ಅರಿವು ಇತ್ತು. ಇಬ್ಬರು ರಹಸ್ಯವಾಗಿ ಪಂಪಾ ನದಿ ತೀರಕ್ಕೆ ಆಗಮಿಸಿದ್ದರು. ಅವರಿಗೆ ಆರು ಮಂದಿ ಪೊಲೀಸರು ಭದ್ರತೆ ಒದಗಿಸಿದ್ದರು. ಪಂಪಾ ನದಿ ತೀರಕ್ಕೆ ಅವರಿಬ್ಬರು ಮಧ್ಯರಾತ್ರಿ 1.30ಕ್ಕೆ ಆಗಮಿಸಿದ್ದರು. ಸಾದಾ ಉಡುಪಿನಲ್ಲಿದ್ದ ಪೊಲೀಸರು ಅವರಿಬ್ಬರಿಗೆ ಭದ್ರತೆ ನೀಡಿದ್ದರು. ನಡೆದುಕೊಂಡು ದೇಗುಲದ ಆವರಣವನ್ನು ಬೆಳಗ್ಗೆ 3.30ಕ್ಕೆ ಪ್ರವೇಶಿಸಿ, ಸನ್ನಿಧಾನಂ ಅನ್ನು 3.53ಕ್ಕೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಮಾಡಿದರು. ಬಳಿಕ ಬೆಳಗ್ಗೆ 5.30ಕ್ಕೆ ಪಂಪಾಕ್ಕೆ ಆಗಮಿಸಿದರು. ನಂತರ ಅವರನ್ನು ತ್ರಿಶ್ಶೂರ್ಗೆ ಕರೆದೊಯ್ಯಲಾಗಿದೆ. ಶುದ್ಧಗೊಳಿಸಲು ದೇಗುಲ ಬಂದ್
ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದರಿಂದ ಬೆಳಗ್ಗೆ 10.30ರಿಂದ ಎರಡು ಗಂಟೆಗಳ ಕಾಲ ಗರ್ಭಗುಡಿಯನ್ನು ಮುಚ್ಚಲಾಗಿತ್ತು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದರ ಶುದ್ಧೀಕರಣ ಪ್ರಕ್ರಿಯೆ ನಡೆಸಿ, ಬಳಿಕ ಬಾಗಿಲನ್ನು ಮತ್ತೆ ತೆರೆಯಲಾಯಿತು. ಈ ಬೆಳವಣಿಗೆ ಅಯ್ಯಪ್ಪ ದೇಗುಲದ ಆಡಳಿತ ನಿರ್ವಹಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯನ್ನು ಸಿಟ್ಟಿಗೆಬ್ಬಿಸಿದೆ. ತಂತ್ರಿ, ಮುಖ್ಯ ಅರ್ಚಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಪ್ರತಿಯೊಬ್ಬ ಮಹಿಳೆಗೂ ಪೂಜಿಸುವ ಹಕ್ಕು ಇದೆ. ಹೀಗಾಗಿ ಅವರಿಗೆ ದೇಗುಲಕ್ಕೆ ತೆರಳಲು ಕೇರಳ ಸರ್ಕಾರ ಅಗತ್ಯ ಭದ್ರತೆ ಒದಗಿಸಿದೆ.
ಬೃಂದಾ ಕಾರಟ್, ಸಿಪಿಎಂ ನಾಯಕಿ ಇಬ್ಬರು ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದು ನನಗೆ ಸಂತೋಷವಾಗಿದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು.
ಉದಿತ್ ರಾಜ್, ಬಿಜೆಪಿ ಸಂಸದ ದೇಗುಲವನ್ನು ಮುಚ್ಚಿದ ಮುಖ್ಯ ತಂತ್ರಿ ಕಂದರಾರು ರಾಜೀವರಾರು ಸುಪ್ರೀಂಕೋರ್ಟ್ ತೀರ್ಪು ಉಲ್ಲಂ ಸಿದ್ದಾರೆ. ಸುಪ್ರೀಂಕೋರ್ಟ್ ಮತ್ತು ದೇವಸ್ವಂ ಬೋರ್ಡ್ ಅವರ ನಡವಳಿಕೆಯನ್ನು ಪರಿಶೀಲಿಸಬೇಕು.
ಕೊಡಿಯೇರಿ ಬಾಲಕೃಷ್ಣನ್,
ಮಾಜಿ ಸಚಿವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಧುನಿಕ ಔರಂಗಜೇಬನಂತೆ ವರ್ತಿಸುತ್ತಿದ್ದಾರೆ. ಮಹಿಳೆಯರ ಪ್ರವೇಶದಿಂದಾಗಿ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಸಿಪಿಎಂ ನಾಯಕರು ಮತ್ತು ಅವರ ಮುಂದಿನ ತಲೆಮಾರು ಈ ಬೆಳವಣಿಗೆಗೆ ಭಾರಿ ಬೆಲೆ ತೆರಬೇಕಾಗುತ್ತದೆ.
ಪಿ.ಎಸ್.ಶ್ರೀಧರನ್ ಪಿಳ್ಳೆ, ಕೇರಳ ಬಿಜೆಪಿ ಅಧ್ಯಕ್ಷ ಮಹಿಳೆಯರು ಪ್ರವೇಶ ನೀಡಿ ವಾಪಸಾದ ಬೆನ್ನಲ್ಲೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಅರ್ಚಕರು ಬುಧವಾರ ಶುದ್ಧೀಕರಣ ಪ್ರಕ್ರಿಯೆ ಕೈಗೊಂಡರು.