Advertisement

ರಮೇಶ ಜಾರಕಿಹೊಳಿ ವಿರುದ್ಧ ಭುಗಿಲೆದ್ದ ಆಕ್ರೋಶ

10:35 PM Dec 31, 2019 | Lakshmi GovindaRaj |

ಬೆಳಗಾವಿ: ಮರಾಠಿ ಭಾಷಿಕ ಮತಗಳನ್ನು ಸೆಳೆದುಕೊಳ್ಳುವಲ್ಲಿ ಕನ್ನಡ ಅಸ್ಮಿತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಭಾಷಾ ರಾಜಕಾರಣ ಮಾಡುತ್ತಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬಿಜೆಪಿ ಯಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಚನ್ನಮ್ಮ ವೃತ್ತದಲ್ಲಿ ರಮೇಶ ಜಾರಕಿ ಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಿದ ಕಾರ್ಯಕರ್ತರು, ಭಾಷಾ ವಿಷ ಬೀಜ ಬಿತ್ತುವ ಮೂಲಕ ಕನ್ನಡಿಗರನ್ನು ಎತ್ತಿ ಕಟ್ಟುವ ಕೆಲಸ ನಡೆದಿದೆ. ನೀಚ ರಾಜಕಾರಣ ಮಾಡಲು ಹೊರಟಿರುವ ಶಾಸಕ ರಮೇಶ ನಾಡದ್ರೋಹ ಮಾಡಿ ದ್ದಾರೆ. ಕರ್ನಾಟಕದಿಂದ ಆಯ್ಕೆಯಾ ದರೂ ಪದೇಪದೆ ಕನ್ನಡಿಗರ ವಿರುದ್ಧ ನೀಡು ತ್ತಿರುವ ಹೇಳಿಕೆಗಳಿಂದ ಅವಮಾನ ವಾಗುತ್ತಿದೆ ಎಂದು ದೂರಿದರು.

ಭಾಷಾ ಕಿಡಿ ಹೊತ್ತಿಸಿ ತಮ್ಮ ರಾಜ ಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಮ್ಮ ರಾಜಕಾರಣಿಗಳಿಗೆ ರಾಜ್ಯದ ಜನತೆ ಪಾಠ ಕಲಿಸಬೇಕು. ಕೂಡಲೇ ಮುಖ್ಯಮಂತ್ರಿ ಗಳು ರಮೇಶ ಜಾರಕಿಹೊಳಿಯನ್ನು ಉಚ್ಚಾಟಿಸಬೇಕು. ಭಾರತೀಯ ದಂಡ ಸಂಹಿತೆ 120 ಬಿ ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next