Advertisement

ವಿಷಪ್ರಸಾದ ಸಂತ್ರಸ್ತರಿಗೆ ಪರಿಹಾರ: ಸಚಿವ ಶೆಟ್ಟಿ ನಡೆಗೆ ಆಕ್ರೋಶ 

10:57 AM Dec 18, 2018 | Team Udayavani |

ಮೈಸೂರು: ಹನೂರಿನ ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸುವಲ್ಲಿ  ಚಾಮರಾಜನಗರ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ ಅವರ ಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ.

Advertisement

ಸರ್ಕಾರದ ಪ್ರತಿನಿಧಿಗಳು ಸಂತ್ರಸ್ತರ ಬಳಿ ತೆರಳಿ ಪರಿಹಾರ ನೀಡುವುದು ಸಾಮಾನ್ಯ. ಆದರೆ ಸಚಿವ ಪುಟ್ಟರಂಗ ಶೆಟ್ಟಿ ಅವರು ಹನೂರಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪರಿಹಾರ ಧನ ವಿತರಿಸಲು ಕಾರ್ಯಕ್ರಮ ಆಯೋಜಿಸಿದ್ದಾರೆ. 

ಮರಣಮೃದಂಗದಿಂದ ತೀವ್ರ ನೊಂದಿರುವ ಸಂತ್ರಸ್ತರು 50 ಕಿ.ಮೀ ದೂರಕ್ಕೆ ಬಂದು ಪರಿಹಾರ ಪಡೆಯಬೇಕಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಆಕ್ರೋಶ ಹೊರ ಹಾಕಲಾಗಿದೆ.

ಮಧ್ಯಾಹ್ನ ಕಾರ್ಯಕ್ರಮ ನಿಗದಿಯಾಗಿದ್ದು, ಜನ ಆಕ್ರೋಶ ಹೊರ ಹಾಕುತ್ತಿದ್ದು ಸಚಿವರು ಸತ್ತವರ ಮನೆಗೆ ಹೋಗಬೇಕೋ? ಸತ್ತವರ ಮನೆಯವರು ಸಚಿವರ ಬಳಿಗೆ ಹೋಗಬೇಕೋ ಎಂದು ಕಿಡಿ ಕಾರುತ್ತಿದ್ದಾರೆ.

ಸಚಿವರು ಪರಿಹಾರ ವಿತರಿಸಿದ ಬಳಿಕ ಗ್ರಾಮಕ್ಕೆ ತೆರಳುತ್ತಾರೋ , ಸಂತ್ರಸ್ತರನ್ನು ಪ್ರವಾಸಿ ಮಂದಿರಕ್ಕೆ ಕರೆದೊಯ್ಯಲು ಸರ್ಕಾರದ ವತಿಯಿಂದ ಏನಾದರು ವ್ಯವಸ್ಥೆ  ಮಾಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. 

Advertisement

ಕೆ.ಆರ್‌.ಆಸ್ಪತ್ರೆಗೆ ಭೇಟಿ 
ಸಚಿವ ಪುಟ್ಟರಂಗ ಶೆಟ್ಟಿ ಅವರು ಕೆ.ಆರ್‌.ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವರ ಯೋಗಕ್ಷೇಮ ವಿಚಾರಿಸಿದರು. 

ಸಂಪೂರ್ಣ ಗುಣಮುಖರಾಗುವ ವರೆಗೆ ಯಾರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಡಿ ಎಂದು ವೈದ್ಯರಿಗೆ ಸೂಚನೆ ನೀಡಿದ್ದಾರೆ.

 ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ 101 ಜನರನ್ನು ದಾಖಲಿಸಿಕೊಂಡಿದ್ದು, ತೀವ್ರ
ನಿಗಾಘಟಕಗಳಲ್ಲಿ 45 ಮಂದಿ, ವೆಂಟಿಲೇಟರ್‌ಗಳಲ್ಲಿ 24 ಮಂದಿಗೆ ಚಿಕಿತ್ಸೆ
ಮುಂದುವರಿಸಲಾಗಿದ್ದು, 56 ಮಂದಿಯನ್ನು ವಾರ್ಡ್‌ ಗೆ ಸ್ಥಳಾಂತರಿಸಲಾಗಿದೆ . ಸಾವಿನ ಸಂಖ್ಯೆ 14 ಕ್ಕೇರಿದೆ. 

Advertisement

Udayavani is now on Telegram. Click here to join our channel and stay updated with the latest news.

Next