Advertisement

ನಮ್ಮ ನಡಿಗೆ ಸ್ವತ್ಛತೆಯೆಡೆಗೆ: ವಿಶೇಷ ಶಿಬಿರ

09:45 AM Aug 22, 2017 | Harsha Rao |

ಕುಂದಾಪುರ:  ಕುಂದಾಪುರ  ಎಜ್ಯುಕೇಶನ್‌ ಸೊಸೈಟಿ ಪ್ರವರ್ತಿತ, ಡಾ| ಬಿ. ಬಿ. ಹೆಗ್ಡೆ ಪ್ರಥಮದರ್ಜೆ  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಒಂದು ದಿನದ ವಿಶೇಷ ಶಿಬಿರ ಗುಡ್ಡೆಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ಜರಗಿತು.

Advertisement

ದೇಗುಲದ ಆನುವಂಶೀಯ ಮೊಕ್ತೇಸರ ಅನಂತ ಪದ್ಮನಾಭ ಅಡಿಗ, ವ್ಯವಸ್ಥಾಪಕ ಗಂಗಾಧರ ಅಡಿಗ ಅವರು ವಿದ್ಯಾರ್ಥಿಗಳಿಗೆ ಸ್ಥಳ ಪುರಾಣದ ಕುರಿತು ಮಾಹಿತಿ ನೀಡಿದರು.

ಅರ್ಚಕ  ಚಂದ್ರಶೇಖರ್‌ಅಡಿಗ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದೇವಾಲಯದ ಆವರಣದಲ್ಲಿ ಸ್ವತ್ಛತಾ ಕಾರ್ಯವನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಸತೀಶ್‌ ಶೆಟ್ಟಿ ಹೆಸ್ಕಾತ್ತೂರು ಮತ್ತು ಪೃಥ್ವೀಶ್ರೀ, ಕಾಲೇಜಿನ ಉಪನ್ಯಾಸಕ ವೃಂದ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅನ್ವಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next