Advertisement

ನಮ್ಮ ಕೊಲೆಯಾದ್ರೂ ಹೋರಾಟ ನಿಲ್ಲಲ್ಲ: ಹೊರಟ್ಟಿ

11:46 AM Nov 12, 2017 | Team Udayavani |

ಕೊಪ್ಪಳ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಾವು ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಹರಿಬ್ರಹ್ಮ ಬಂದರೂ ನಮ್ಮ ಹೋರಾಟ ನಿಲ್ಲಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿ, ಇನ್ಮುಂದೆ ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಲ್ಲ. ಹರಿಬ್ರಹ್ಮ ಬಂದರೂ ಹೋರಾಟ ಮುನ್ನಡೆಯುತ್ತದೆ. ಕೆಲವು ವ್ಯಕ್ತಿಗಳು ನಮ್ಮವರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಯಾವುದೇ ಬೆದರಿಕೆ, ನೋಟಿಸ್‌ಗಳಿಗೆ ಬಗ್ಗಲ್ಲ. ನಮ್ಮ ಕೊಲೆ ನಡೆದರೂ ಚಿಂತೆಯಿಲ್ಲ. ನಮಗೆ ಗುಂಡು ಹಾಕಿದರೂ ನಾವು ಬಿಡಲ್ಲ. ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೂ ನಾವು ನಿದ್ದೆ ಮಾಡಲ್ಲ. ಸರ್ಕಾರ ಕೂಡಲೇ ಎಲ್ಲವನ್ನೂ ಪರಿಶೀಲನೆ ನಡೆಸಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next