Advertisement

ಪಿಒಕೆ, ಗಿಲ್ಗಿಟ್ ಪ್ರದೇಶ ಭಾರತಕ್ಕೆ ಸೇರಿದಾಗಲೇ ನಮ್ಮ ಸಂಕಲ್ಪ ಪೂರ್ಣ: ರಾಜನಾಥ್ ಸಿಂಗ್

03:06 PM Oct 27, 2022 | Team Udayavani |

ಜಮ್ಮು-ಕಾಶ್ಮೀರ: ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಜಮ್ಮು-ಕಾಶ್ಮೀರದ ಎಲ್ಲಾ ಪ್ರದೇಶಗಳನ್ನು ನಾವು ವಾಪಸ್ ಪಡೆದ ನಂತರವೇ ನಮ್ಮ ಸಂಕಲ್ಪ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ದೆಹಲಿಗೆ ಬಿಜೆಪಿ ಬೆಟ್ಟದಷ್ಟು ಕಸದ ರಾಶಿ ಬಿಟ್ಟು ಬೇರೆ ಏನೂ ಕೊಡುಗೆ ಕೊಟ್ಟಿಲ್ಲ: ಕೇಜ್ರಿವಾಲ್

ಸಿಂಗ್ ಅವರು ಗುರುವಾರ (ಅಕ್ಟೋಬರ್ 27) ಬಡ್ಗಾಮ್ ನಲ್ಲಿ ಭಾರತೀಯ ಸೇನೆಯ 76ನೇ ಪದಾತಿ ದಳ ಆಯೋಜಿಸಿದ್ದ “ಶೌರ್ಯ ದಿನದ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, ಜಮ್ಮು-ಕಾಶ್ಮೀರ(ಪಿಒಕೆ) ಪೂರ್ಣ ಭಾಗ ಸೇರಿದಂತೆ ಗಿಲ್ಗಿಟ್, ಬಾಲ್ಟಿಸ್ತಾನ್ ಪ್ರದೇಶವನ್ನು ಮರಳಿ ಪಡೆದ ನಂತರವಷ್ಟೇ ನಮ್ಮ ಸಂಕಲ್ಪಕ್ಕೆ ಅರ್ಥ ಬರಲಿದೆ ಎಂದರು.

ಭಾರತ, ಪಾಕಿಸ್ತಾನ ಇಬ್ಭಾಗವಾದ ನಂತರ ಪಾಕಿಸ್ತಾನ ತನ್ನ ನಿಜ ಬಣ್ಣವನ್ನು ಪ್ರದರ್ಶಿಸಿದೆ. ನಮಗೆ ಜಮ್ಮು-ಕಾಶ್ಮೀರದ ಮೇಲಿನ ದಾಳಿ ಹಾಗೂ ನುಸುಳುಕೋರರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನಡವಳಿಕೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ನಾವೀಗ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಲ್ಲಿ ಅಭಿವೃದ್ಧಿಯನ್ನು ಆರಂಭಿಸಿದ್ದೇವೆ. ನಾವು ಯಾವಾಗ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು ಮರಳಿ ಪಡೆದಾಗಲೇ ನಮ್ಮ ಗುರಿ ಸಾಧಿಸಿದಂತಾಗಲಿದೆ ಎಂದು ಸಿಂಗ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next