Advertisement

ನಮ್ಮ ಹೀರೋಯಿನ್‌ ತುಂಬಾ ಒಳ್ಳೆಯವ್ರು!

06:27 PM Sep 11, 2017 | |

ನಮ್ಮ ನಿರ್ಮಾಪಕರು ತುಂಬಾ ಒಳ್ಳೆಯವ್ರು, ನಿರ್ದೇಶಕರು ಸೂಪರ್‌, ನಾಯಕ ಎಕ್ಸಟ್ರಾರ್ಡಿನರಿ, ನಾಯಕಿಯಂತೂ ಡೌನ್‌ ಟು ಅರ್ಥ್ …. ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಈ ತರಹದ ಬಣ್ಣಗೆಗಳು ಕೇಳಿಬರುತ್ತಲೇ ಇರುತ್ತದೆ. “ಚಿತ್ರೀಕರಣದ ವೇಳೆ ನಾವು ಕುಟುಂಬದ ತರಹ ಇದ್ವಿ’ ಎಂದು ಹೇಳುತ್ತಲೇ ಗುಣಗಾನ ಮಾಡುವವರಿದ್ದಾರೆ. ಅದು ಅವರ ಖುಷಿ.

Advertisement

ಇತ್ತೀಚೆಗೆ “ಗೌಡ್ರು ಹೋಟೆಲ್‌’ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ನಿರ್ದೇಶಕ ಪಿ.ಕುಮಾರ್‌, ಚಿತ್ರದ ನಾಯಕಿ ವೇದಿಕಾ ಅವರು ತುಂಬಾ ಒಳ್ಳೆಯವರು ಎಂದು ಗುಣಗಾನ ಮಾಡಿದರು. ಕೇವಲ ಅಷ್ಟಕ್ಕೇ ಅವರು ಬಿಡಲಿಲ್ಲ. ವೇದಿಕಾ ಯಾಕೆ ಒಳ್ಳೆಯವರು ಎಂದು ವಿವರಿಸುತ್ತಾ ಹೋದರು. ಚಿತ್ರೀಕರಣದ ವೇಳೆ ವೇದಿಕಾ ಅವರ ನಡವಳಿಕೆ ಕಂಡು ಖುಷಿಯಾದ ಪಿ.ಕುಮಾರ್‌, ವೇದಿಕಾ ಯಾಕೆ ಒಳ್ಳೆಯವರು ಎಂಬುದಕ್ಕೆ ಕಂಡುಕೊಂಡ ಕಾರಣಗಳು ಇಲ್ಲಿವೆ …

1. “ಗೌಡ್ರು ಹೋಟೆಲ್‌’ ಚಿತ್ರದ ನಾಯಕ ರಚನ್‌ ಚಿತ್ರರಂಗಕ್ಕೆ ಹೊಸಬರು. ಚಿತ್ರೀಕರಣಕ್ಕೆ ಮುಂಚೆ ವರ್ಕ್‌ಶಾಪ್‌ ಆಯೋಜಿಸಿದ ನಿರ್ದೇಶಕ ಪಿ.ಕುಮಾರ್‌ ಅದಕ್ಕೆ ನಾಯಕಿ ವೇದಿಕಾ ಅವರನ್ನು ಕರೆದಿದ್ದಾರೆ. ವೇದಿಕಾ ಕೂಡಾ ಆ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ್ದಾರೆ.

ವೇದಿಕಾ ಈಗಗಾಲೇ ಸಿನಿಮಾಗಳಲ್ಲಿ ನಟಿಸಿ ಅನುಭವವಿರುವ ನಟಿ. ಅದಕ್ಕಿಂತ ಹೆಚ್ಚಾಗಿ ಬಿಝಿ ನಟಿ. ವರ್ಕ್‌ಶಾಪ್‌ಗೆ ನಾನು ಬರಲ್ಲ, ನಿಮ್ಮ ಹೀರೋಗೆ ಮಾಡಿಸಿ ಎಂದು ಹೇಳಿ ಬಾರದೇ ಇರಬಹುದಿತ್ತು. ಆದರೂ ಬಂದು ಪ್ರೋತ್ಸಾಹಿಸಿದ್ದು ಅವರ ಒಳ್ಳೆಯತನ. ಆರಂಭದಲ್ಲೇ ನಿರ್ದೇಶಕರಿಗೆ ಇದು ಖುಷಿಕೊಟ್ಟಿದೆ. 

2. ಅದೊಂದು ದಿನ ರಾತ್ರಿ ಶೂಟಿಂಗ್‌ನಲ್ಲಿ ವೇದಿಕಾ ರಸ್ತೆಯಲ್ಲಿ ಓಡಿಕೊಂಡು ಬರಬೇಕಾದ ಸನ್ನಿವೇಶ. ವೇದಿಕಾ ಹಾಕಿಕೊಂಡಿದ್ದ ಹಿಲ್ಡ್ಸ್ ಕಳಚಿ, ಅಸಿಸ್ಟೆಂಟ್‌ ಕೊಟ್ಟ ಶೂ ಹಾಕಿಕೊಂಡು ಓಡಲಾರಂಭಿಸುತ್ತಾರೆ. ಸ್ವಲ್ಪ ಓಡುವಷ್ಟರಲ್ಲಿ ಏನೋ ಇರುಸು ಮುರುಸಾಗಿ ನಿಂತ ವೇದಿಕಾ, ಶೂ ಬಿಚ್ಚುತ್ತಾರೆ.

Advertisement

ನೋಡಿದಾಗ ಶೂ ಒಳಗಡೆ ಒಂದು ಜಿರಳೆ ಸೇರಿಕೊಂಡಿದೆ. ವೇದಿಕಾ ತಮ್ಮ ಅಸಿಸ್ಟೆಂಟ್‌ನಲ್ಲಿ ಯಾವುದೇ ರೀತಿ ಮುನಿಸಿಕೊಳ್ಳದೇ ಆರಾಮವಾಗಿ ಬೇರೆ ಶೂ ಹಾಕಿಕೊಂಡು ಶೂಟಿಂಗ್‌ ಮುಂದುವರೆಸುತ್ತಾರೆ. ಕೆಲವು ನಾಯಕಿಯರು ಜಗಳವಾಡುವುದನ್ನು ಕಂಡ ನಿರ್ದೇಶಕರಿಗೆ, ಇದು ವೇದಿಕಾ ಅವರ “ದೊಡ್ಡಗುಣ’ ಎನಿಸಿದೆ.

3. ಫಾರಿನ್‌ನಲ್ಲಿ ಅಂಡರ್‌ವಾಟರ್‌ ಶೂಟಿಂಗ್‌ನಲ್ಲಿ ವೇದಿಕಾ ಭಾಗವಹಿಸಿದ ಸಂದರ್ಭ. ನೀರಲ್ಲಿ ಈಜುತ್ತಿರಬೇಕಾದರೆ ವೇದಿಕಾಗೆ ಏನೋ ಅನುಮಾನ ಬಂದು ತಮ್ಮ ಬೆನ್ನತ್ತ ಕೈಯಾಡಿಸುತ್ತಾರೆ. ಆಗ ಅವರು ಹಾಕಿದ ಜಾಕೆಟ್‌ನ ಒಂದು ಬಟನ್‌ ಕಿತ್ತುಹೋಗಿರುತ್ತದೆ. ತಕ್ಷಣ ಟವೆಲ್‌ ಸುತ್ತಿಕೊಂಡು ಮೇಲೆ ಬಂದ ವೇದಿಕಾ, “ಅದರ ಒಂದು ಬಟನ್‌ ಹೋಗಿದೆ. ಅದನ್ನು ಹಾಕಿದ ನಂತರ ಶೂಟಿಂಗ್‌ ಮಾಡುವ’ ಎಂದು ಕೂಲ್‌ ಆಗಿ ಹೇಳುತ್ತಾರೆ.

ಬಟನ್‌ ಹಾಕಿದ ನಂತರ ಮತ್ತೆ ನೀರಿಗಿಳಿಯುತ್ತಾರೆ ವೇದಿಕಾ. ಆ ಘಟನೆಗೆ ಮೂಡ್‌ಆಫ್ ಆಗಿ “ನಿಮಗೆ ಜವಾಬ್ದಾರಿಯಿಲ್ಲ’ ಎಂದು ಚಿತ್ರತಂಡದವರಿಗೆ ಬೈದು ಇಡೀ ದಿನ ಕ್ಯಾರಾವಾನ್‌ನಲ್ಲಿ ಕುಳಿತು ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ್ದರೆ, ಚಿತ್ರತಂಡದವರಿಗೆ ನಷ್ಟವಾಗಬಹುದಿತ್ತು. ಆದರೆ, ವೇದಿಕಾ ಮಾತ್ರ ಹಾಗೆ ಮಾಡದೇ ಘಟನೆಯನ್ನು ಕೂಲ್‌ ಆಗಿ ತೆಗೆದುಕೊಂಡಿದ್ದು ನಿರ್ದೇಶಕರಿಗೆ ವೇದಿಕಾ ಮೇಲಿನ ಗೌರವ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next