Advertisement

ವಿಷದ ವಿರುದ್ಧ ನಮ್ಮ ಹೋರಾಟ: ರಾಹುಲ್‌

12:02 PM Jun 10, 2019 | Sriram |

ವಯನಾಡ್‌: ಸ್ವಕ್ಷೇತ್ರ ವಯನಾಡ್‌ ಪ್ರವಾಸ ದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ 2ನೇ ದಿನದ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.


Advertisement

ನಾವು ರಾಷ್ಟ್ರೀಯ ಮಟ್ಟದಲ್ಲಿ ವಿಷದ ವಿರುದ್ಧ ಹೋರಾಡು ತ್ತಿದ್ದೇವೆ. ಮೋದಿ ಅವರು ಲೋಕಸಭೆ ಚುನಾವಣಾ ಪ್ರಚಾರವು ಸುಳ್ಳುಗಳು, ವಿಷ ಹಾಗೂ ದ್ವೇಷದಿಂದ ಕೂಡಿತ್ತು. ಆದರೆ ನಮ್ಮ ಪಕ್ಷವು ಸತ್ಯ, ಪ್ರೀತಿ ಮತ್ತು ವಾತ್ಸಲ್ಯದಿಂದ ಪ್ರಚಾರ ನಡೆಸಿತು ಎಂದಿದ್ದಾರೆ.

ಶನಿವಾರ ರಾಹುಲ್‌ ಕಲ್ಪೆಟ್ಟಾ, ಕಂಬಳಕಾಡು, ಪನಮಾರಮ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಜತೆಗೆ ರೋಡ್‌ಶೋವನ್ನೂ ನಡೆಸಿದ್ದಾರೆ. ಕರ್ನಾಟಕದ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್‌, ಕೇರಳ ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ಕೇರಳ ಕಾಂಗ್ರೆಸ್‌ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್‌ ಮತ್ತಿತರ ನಾಯಕರು ರಾಹುಲ್‌ಗೆ ಸಾಥ್‌ ನೀಡಿದರು. ಶನಿವಾರ ರಾಹುಲ್‌ ಒಟ್ಟು 6 ರೋಡ್‌ಶೋಗಳಲ್ಲಿ ಭಾಗವಹಿಸಿದರು.

ದೂರುಗಳನ್ನು ಸ್ವೀಕರಿಸಿದ ರಾಹುಲ್‌: ಇದಕ್ಕೂ ಮುನ್ನ ವಯನಾಡ್‌ನ‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಹುಲ್‌ ಅವರು ಜನರ ದೂರುಗಳು ಹಾಗೂ ಮನವಿಗಳನ್ನು ಸ್ವೀಕರಿಸಿದರು. ರೈತರು, ಬುಡಕಟ್ಟು ಜನಾಂಗೀಯರು ಹಾಗೂ ಸಮಾಜದ ಇತರೆ ವರ್ಗಗಳ ನಿಯೋಗವು ರಾಹುಲ್‌ರನ್ನು ಭೇಟಿಯಾಗಿ ಸಮಸ್ಯೆಗಳನ್ನು ಹೇಳಿಕೊಂಡಿತು.

ಇದೇ ವೇಳೆ, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ನಾಯಕರು, ಜಿಲ್ಲೆಯ ಅಧಿಕಾರಿಗಳೊಂದಿಗೆ ರಾಹುಲ್‌ ಸಭೆ ನಡೆಸಿ, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next