Advertisement

Osmania University ವಿದ್ಯಾರ್ಥಿ ಆತ್ಮಹತ್ಯೆ: ಪರೀಕ್ಷೆ ಭಯ ?

12:08 PM Dec 04, 2017 | Team Udayavani |

ಹೈದರಾಬಾದ್‌ : ನಿನ್ನೆ ಭಾನುವಾರ ಹಾಸ್ಟೆಲ್‌ ಶೌಚಾಲಯದಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡನೆನ್ನಲಾದ ವಿದ್ಯಾರ್ಥಿ ಇ ಮುರಳಿ ಎಂಬಾತನ ಶವವನ್ನು ಒಯ್ಯಲು ಪೊಲೀಸರಿಗೆ ಬಿಡದ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂದು ಸೋಮವಾರ ಉಗ್ರ ಪ್ರತಿಭಟನೆ ನಡೆಸಿದರು. 

Advertisement

ಮೊದಲ ವರ್ಷದ ಎಂಎಸ್ಸಿ ಫಿಸಿಕ್ಸ್‌ ವಿದ್ಯಾರ್ಥಿಯಾಗಿರುವ ಮುರಳಿಯ ಶವ ಹಾಸ್ಟೆಲ್‌ನ ಶೌಚಾಲಯದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

“ನಾನೆಂದೂ ಈ ಹಿಂದೆ ಪರೀಕ್ಷೆಯಲ್ಲಿ ಫೇಲಾದುದಿಲ್ಲ. ಹಾಗೆಯೇ ನಾನು ಈಗಲೂ ಪರೀಕ್ಷೆಯಲ್ಲಿ ಫೇಲಾಗಲು ಬಯಸುವುದಿಲ್ಲ’ ಎಂದು ಮರಳಿ ಬರೆದಿಟ್ಟಿದ್ದ ಎನ್ನಲಾದ ಡೆತ್‌ ನೋಟ್‌, ಶವ ನೇತಾಡುತ್ತಿದ್ದ ಸ್ಥಳದಲ್ಲೇ ಪೊಲೀಸರಿಗೆ ಸಿಕ್ಕಿದೆ. 

ವಿದ್ಯಾರ್ಥಿ ಮುರಳಿಗೆ ಪರೀಕ್ಷೆ ಸಂಬಂಧ ಮನೋ ಖನ್ನತೆ ಇತ್ತೆಂದು ಕಾಣುತ್ತಿದೆ; ನಾವು ಆತನ ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು  ಹೇಳಿದ್ದಾರೆ. 

ಈ ನಡುವೆ ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿಯ ನಾಯಕ ಹಾಗೂ ನಿರುದ್ಯೋಗಿ ಯುವ ಸಂಘದ ಅಧ್ಯಕ್ಷರಾಗಿರುವ ಕೆ ಮಾನವತಾ ರಾಯ್‌ ಅವರು ಮಾತನಾಡುತ್ತಾ, “ಮುರಳಿ ನಿರುದ್ಯೋಗಿಯಾಗಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ; ಆತನ ಆತ್ಮಹತ್ಯೆಗೆ ಸರಕಾರವೇ ಹೊಣೆ. ಹಾಗಾಗಿ ಸರಕಾರ ಆತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು; ಇಲ್ಲದಿದ್ದರೆ ನಾವು ಇಲ್ಲಿಂದ ಆತನ ಪಾರ್ಥಿವ ಶರೀರವನ್ನು ಒಯ್ಯಲು ಪೊಲೀಸರಿಗೆ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.  

Advertisement

ಮೃತ ವಿದ್ಯಾರ್ಥಿ ಮುರಳಿಯು ಸಿದ್ದಿಪೆಟ್‌ ಜಿಲ್ಲೆಯ ದೌಲಾಪುರ ಗ್ರಾಮದವನಾಗಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next