Advertisement

Organ Donation; 6 ಮಂದಿಯ ಬಾಳಿಗೆ ಬೆಳಕಾದ ಚಂದನಾ

11:27 PM Jul 29, 2024 | Team Udayavani |

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ತುಮಕೂರಿನ ತಿಪಟೂರು ತಾಲೂಕು ಹಳೇಪಾಳ್ಯ ಗ್ರಾಮದ 13 ವರ್ಷದ ಬಾಲಕಿಯ ದೇಹದ ಆರು ಅಂಗಗಳನ್ನು ಪೋಷಕರು ದಾನ ಮಾಡುವ ಮೂಲಕ ಮಗಳ ಅಗಲಿಕೆಯ ನೋವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ.

Advertisement

ವಸಂತ ಕುಮಾರ್‌ ಅವರ ಹಿರಿಯ ಪುತ್ರಿ 7ನೇ ತರಗತಿಯ ವಿದ್ಯಾರ್ಥಿನಿ ಚಂದನಾ ಮೃತ ಬಾಲಕಿ.

ಚಂದನಾ ಜು. 23ರಂದು ಸೈಕಲ್‌ನಲ್ಲಿ ಶಾಲೆಗೆ ಹೋಗುವಾಗ ಲಾರಿ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ| ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಂದನಾ ಸಾವಿನ ಬಳಿಕವೂ 6 ಮಂದಿಯ ಬಾಳಿಗೆ ಬೆಳಕಾಗಿದ್ದಾರೆ ಎಂದು ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next