Advertisement

ಪರಿಹಾರ ನೀಡದ ವಿಮಾ ಕಂಪೆನಿ ಆಸ್ತಿ ಮುಟ್ಟುಗೋಲಿಗೆ ಆದೇಶ

09:17 PM Apr 19, 2023 | Team Udayavani |

ಕುಂದಾಪುರ: ವಾಹನ ಅಪಘಾತವಾಗಿ ಪರಿಹಾರಕ್ಕಾಗಿ ನ್ಯಾಯಾಲಯಕ್ಕಾಗಿ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸಿದ ನ್ಯಾಯಾಯವು ಪರಿಹಾರ ನೀಡುವಂತೆ ಆದೇಶಿಸಿದ್ದರೂ, ಅದನ್ನು ಪಾವತಿಸದ ಓರಿಯೆಂಟಲ್‌ ಇನ್ಸುರೆನ್ಸ್‌ ವಿಮಾ ಕಂಪೆನಿಯ ಚರಾಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಕುಂದಾಪುರ ನ್ಯಾಯಾಲಯ ಆದೇಶಿಸಿದೆ.
2015ರ ಜ. 6ರಂದು ನಡೆದ ಅಪಘಾತದಲ್ಲಿ ಗುಲ್ವಾಡಿಯ ನಿವಾಸಿ ರವೀಂದ್ರ ಆಚಾರ್ಯ ಸಾವನ್ನಪ್ಪಿದ್ದರು. ವಿಮಾ ಪರಿಹಾರಕ್ಕಾಗಿ ಕುಂದಾಪುರದ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ವಾರಸುದಾರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯವು ಸಂತ್ರಸ್ತ ಕುಟುಂಬಕ್ಕೆ 26.66 ಲಕ್ಷ ರೂ. ಅನ್ನು ಶೇ.6 ರ ಬಡ್ಡಿ ಸಹಿತ ಪಾವತಿಸುವಂತೆ ಓರಿಯೆಂಟಲ್‌ ಇನ್ಸುರೆನ್ಸ್‌ ಕಂಪೆನಿಗೆ ಆದೇಶಿಸಿತ್ತು.

Advertisement

ಆದರೆ ಇನ್ಸುರೆನ್ಸ್‌ ಕಂಪೆನಿಯು ನಿಗದಿತ ಸಮಯದಲ್ಲಿ ಪರಿಹಾರ ಮೊತ್ತವನ್ನು ಪಾವತಿಸದೇ ಇರುವುದರಿಂದ ಕಂಪೆನಿಯ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸಿದೆ. ಅರ್ಜದಾರರ ಪರ ಕುಂದಾಪುರದ ವಕೀಲ ಹಂದಕುಂದ ಅಶೋಕ ಶೆಟ್ಟ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next