Advertisement

“ಕೊಹ್ಲಿ ಪಡೆ ಕೇಸರೀಕರಣಕ್ಕೆ ಪ್ರಧಾನಿ ಮೋದಿ ಯತ್ನ’

03:33 PM Jun 27, 2019 | Team Udayavani |

ಮುಂಬೈ: ಪ್ರಸಕ್ತ ಸಾಲಿನ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಇಂಗ್ಲೆಂಡ್‌ ವಿರುದ್ಧದ ಪಂದ್ಯ ಆಡಲಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisement

ಈ ಬೆನ್ನಲ್ಲೇ ಭಾರತ ತಂಡದ ಮೇಲೆಯೂ ಮೋದಿ ಪ್ರಭಾವ ಬೀರಿದ್ದಾರೆ. ಕೇಸರೀಕರಣಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮುಂಬೈ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ದೂರಿದ್ದಾರೆ.

ಒಂದು ವೇಳೆ ಕೇಸರಿ ಬಟ್ಟೆ ಧರಿಸಿ ಭಾರತ ಪಂದ್ಯವನ್ನಾಡಿದರೆ ಇದಕ್ಕೆ ವಿರೋಧ ವ್ಯಕ್ತವಾಗಲಿದೆ ಎಂದು ಅಜ್ಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next