Advertisement

ವಿಪಕ್ಷದವರಿಗೂ ಮೋದಿ ಬೇಕು: ಶ್ರೀನಿವಾಸ ಪೂಜಾರಿ

07:54 PM Apr 10, 2019 | Team Udayavani |

ಎಡಪದವು: ದಿನಕ್ಕೊಮ್ಮೆ ಯಾದರೂ ಮೋದಿ ಹೆಸರು ಹೇಳದಿದ್ದರೆ ಪ್ರತಿಪಕ್ಷದವರಿಗೆ ನಿದ್ದೆಯೇ ಬರುವುದಿಲ್ಲ. ಅವರಿಗೂ ಮೋದಿಜಿಯೇ ಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಬುಧವಾರ ಎಡಪದವು ನಾರಾಯಣ ಗುರು ಮಂದಿರದಲ್ಲಿ ನಡೆದ ಗುರುಪುರ ಮತ್ತು ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಣಾಮಕಾರಿ ಪ್ರಚಾರ
ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ನಡುವಿನ ಕೊಂಡಿಯಾಗಿ ಪಂಚಾಯತ್‌ ಸದಸ್ಯರು ಕೆಲಸ ಮಾಡಬೇಕು. ಜನರ ನಾಡಿಮಿಡಿತವನ್ನು ಚೆನ್ನಾಗಿ ತಿಳಿಯಲು ಪಂಚಾಯತ್‌ ಸದಸ್ಯರಿಗೆ ಸಾಧ್ಯ. ಆದ್ದರಿಂದ ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್‌ ಸದಸ್ಯರಾದ ಜನಾರ್ದನ ಗೌಡ ಮುಚ್ಚಾರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ರಘುವೀರ್‌ ಮತ್ತು ರಾಜೇಶ್‌, ತಾ.ಪಂ. ಸದಸ್ಯರಾದ ನಾಗೇಶ್‌ ಶೆಟ್ಟಿ ಮುತ್ತೂರು, ನಾರಾಯಣ ಗುರು ಮಂದಿರದ ಅಧ್ಯಕ್ಷ ಸಂಜೀವ ಕೋಟ್ಯಾನ್‌, ಗುರುಪುರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೋಹನ್‌ ಅಥಿಕಾರಿ, ಎಡಪದವು ಶಕ್ತಿಕೇಂದ್ರದ ಅಧ್ಯಕ್ಷ ಆನಂದ ದೇವಾಡಿಗ, ಎಡಪದವು ಶಕ್ತಿ ಕೇಂದ್ರದ ಪ್ರಚಾರಿ ಪ್ರಸಾದ್‌ ಕುಮಾರ್‌ ಎಂ., ಶಕ್ತಿಕೇಂದ್ರದ ಕಾರ್ಯದರ್ಶಿಗಳು, ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಸಂವಾದದಲ್ಲಿ ಮೊದ ಲಾ ದ ವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next