Advertisement

ಪದವಿ ಶುಲ್ಕ ಹೆಚ್ಚಳಕ್ಕೆ ವಿರೋಧ

05:51 PM Jun 29, 2018 | |

ಶಿವಮೊಗ್ಗ: ಪದವಿ ಶಿಕ್ಷಣಕ್ಕೆ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಗುರುವಾರ ಸಹ್ಯಾದ್ರಿ ಕಾಲೇಜಿನ ವಾಣಿಜ್ಯ ವಿಭಾಗದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುವೆಂಪು ವಿವಿ ನಿಯಮದ ಪ್ರಕಾರ ಯಾವುದೇ ಕಾಲೇಜಿನ ಶುಲ್ಕವನ್ನು ಶೇ. 25ಕ್ಕಿಂತ ಅಧಿಕವಾಗಿ ಹೆಚ್ಚಿಸುವಂತಿಲ್ಲ. ಆದರೆ 2018-19ನೇ ಸಾಲಿನ ಪ್ರಥಮ ಬಿಕಾಂ ಪ್ರವೇಶಕ್ಕೆ 7 ಸಾವಿರ ರೂ. ನಿಗಧಿ ಪಡಿಸಲಾಗಿದೆ. ಕಳೆದ ಬಾರಿ 4 ಸಾವಿರ ರೂ. ಶುಲ್ಕ ಇತ್ತು. ಇದೀಗ ಏಕಾಏಕಿ 3 ಸಾವಿರ ರೂ.ನಷ್ಟು ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕುವೆಂಪು ವಿವಿ ಘಟಕ ಕಾಲೇಜು ಆದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಶೇ. 75ರಷ್ಟು ಶುಲ್ಕ ಹೆಚ್ಚಿಸಲಾಗಿದೆ. ಗ್ರಾಮೀಣ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆಯಾಗುತ್ತದೆ. ಶುಲ್ಕ ಹೆಚ್ಚಳ ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಚ್ಚಳ ಶುಲ್ಕ ವಸೂಲಿ ಮಾಡಿದ್ದರೆ ವಿದ್ಯಾರ್ಥಿಗಳಿಗೆ ಹಣ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಚಿನ್‌ ರಾಯ್ಕರ್‌, ಅಭಿಷೇಕ್‌, ಮಂಜುನಾಥ್‌, ಮಲ್ಲಿಕಾರ್ಜುನ್‌, ತಿಲಕ್‌, ಕಿರಣ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next