Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ

07:28 AM May 28, 2020 | Lakshmi GovindaRaj |

ದೊಡ್ಡಬಳ್ಳಾಪುರ: ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಗ್ರಾಪಂಗೆ ಆಡಳಿತ ಸಮಿತಿ ನೇಮಕಗೊಳಿಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಹಾಗೂ ಮಾತೃಪೂರ್ಣ ಯೋಜನೆ ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌  ತಾಲೂಕು ಬ್ಲಾಕ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ನವಿ ಸಲ್ಲಿಸಿದರು.

Advertisement

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯದಲ್ಲಿ ಗ್ರಾಪಂ ಅವಧಿ ಇದೇ ಮೇ 31ಕ್ಕೆ ಮುಕ್ತಾಯವಾಗಲಿ ದ್ದು, ಈಗಾಗಲೇ ಚುನಾವಣೆ ನಡೆಯಬೇಕಿತ್ತು. ಆದರೆ ಸರ್ಕಾರ ಚುನಾವಣೆ ನಡೆಸದೇ ತಮ್ಮ ಕಾರ್ಯಕರ್ತರ‌ನ್ನು ಆಡಳಿತ ಸಮಿತಿಗೆ ನೇಮಕಕ್ಕೆ ಹೊರಟಿರು ವುದು ಖಂಡನೀಯವಾಗಿದೆ. ಪಂಚಾಯತ್‌ ರಾಜ್‌ ಕಾಯ್ದೆಗೆ ಧಕ್ಕೆಯಾಗಲಿದೆ.

ಸರ್ಕಾರ ಈಗಿರುವ ಸದಸ್ಯರ ಅವಧಿ ವಿಸ್ತರಿಸಲಿ ಇಲ್ಲವೇ ಚುನಾವಣೆ ನಡೆಸಲಿ. ರಾಜ್ಯದ ಬಿಜೆಪಿ ಸರ್ಕಾರ ಬಂದಾಗಿ ನಿಂದ ತಾಲೂಕಿನ ಹಲವಾರು ಕಾಮಗಾರಿಗಳಿಗೆ ಬಿಡು ಗಡೆಯಾಗಿರುವ ಅನುದಾನ ತಡೆಹಿಡಿದಿರುವುದು ಜನ ವಿರೋಧಿಯಾ ಗಿದೆ ಎಂದರು. ಎಪಿಎಂಸಿ ಹಾಗೂ ಟಿಎಪಿಎಂಸಿ ನಿರ್ದೇಶಕ ನಾರನ ಹಳ್ಳಿ ಎಂ.ಗೋವಿಂದರಾಜು, ಕೆಪಿಸಿಸಿ  ಸದಸ್ಯ ಜಿ. ಲಕ್ಷ್ಮೀ ಪತಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಜಯಮ್ಮ ಲಕ್ಷ್ಮೀ ನಾರಾಯಣ್‌, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿ ವಾಸ್‌, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್‌,

ಕಾಂಗ್ರೆಸ್‌ ತಾಲೂಕು ಬ್ಲಾಕ್‌ ಅಧ್ಯಕ್ಷ ಎಂ.ಬೈರೇಗೌಡ, ಕಸಬ ಬ್ಲಾಕ್‌  ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ್‌ (ಅಪ್ಪಿ), ತಾಪಂ ಸದಸ್ಯ ನಾರಾ ಯಣಗೌಡ, ಎಸ್‌.ಸಿ. ಘಟಕದ ನಗರ ಅಧ್ಯಕ್ಷ ಬಿ.ಮುನಿ ರಾಜು, ನಗರ ಪ್ರಧಾನ ಕಾರ್ಯದರ್ಶಿ ಅಂಜಿನ ಮೂರ್ತಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ರೇವತಿ  ಅನಂತರಾಮ್‌, ತಾಲೂಕು ಅಧ್ಯಕ್ಷೆ ಪುಷ್ಪಲತಾ, ನಗರ ಘಟಕದ ಅಧ್ಯಕ್ಷೆ ಪ್ರಭಾವತಿ, ಮುಖಂಡ ತಿ. ರಂಗ ರಾಜು, ಬಿ.ಎಚ್‌. ಕೆಂಪಣ್ಣ, ಹೇಮಂತರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next