Advertisement

ವಿರೋಧ ಪಕ್ಷಗಳಿಂದ ಓಟ್‌ ಬ್ಯಾಂಕ್‌ ರಾಜಕಾರಣ

10:54 PM Dec 21, 2019 | Lakshmi GovindaRaj |

ಬೆಂಗಳೂರು: ಅಮೆರಿಕದಂತಹ ದೇಶಗಳಲ್ಲಿ ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ನ್ಯಾಯ ಯುತವಾಗಿ ನೋಂದಣಿ ಮಾಡಿಕೊಂಡು ಅನರ್ಹರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕೆಲವು ಪಕ್ಷದವರು ಒಂದು ಸಮುದಾಯವನ್ನು ಗುರಿಯಾಗಿಸಿ ಟ್ಟುಕೊಂಡು ಕಾಯ್ದೆ ಜಾರಿ ಮಾಡ ಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಟೀಕಿಸಿದರು.

Advertisement

ರೋಹಿಂಗ್ಯಾ ಮುಸ್ಮಿಮರಿಗೆ ಚೀನಾ ಗಡಿ ಕೇವಲ 400 ಕಿ.ಮೀ. ಇದ್ದರೂ 2,700 ಕಿ.ಮೀ.ದೂರವಿರುವ ಭಾರತಕ್ಕೆ ಬರುತ್ತಿದ್ದಾರೆ. ಚೀನಾದಲ್ಲಿ ನುಸುಳುಕೋರರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಗುತ್ತದೆ. ಆದರೀಗ ಭಾರತದಲ್ಲಿ ಅಕ್ರಮ ಪ್ರವೇಶ ಮಾಡಿದವರು ಮಾತ್ರ ಆತಂಕಕ್ಕೊಳಪಟ್ಟಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳದೆ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ವಿರೋಧ ಪಕ್ಷದವರು ಬೆಂಕಿಗೆ ತುಪ್ಪ ಸುರಿಯ್ತುತಿದ್ದಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next