Advertisement

ಲಾಕ್ ಡೌನ್ ಆದ ಗ್ರಾಮಗಳಲ್ಲಿ ಜೂ.7ರಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ:ಡಿ.ಸಿ ಜಿ.ಜಗದೀಶ್

11:19 AM Jun 05, 2021 | Team Udayavani |

ಕುಂದಾಪುರ:  ಸಂಪೂರ್ಣ ಲಾಕ್ ಡೌನ್ ಆದ ಗ್ರಾ.ಪಂ.ಗಳಲ್ಲಿ ಜೂನ್ 7ರಂದು ಒಂದು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು. ಜೂ . 8 ರಂದು ಮುಂದಿನ ಕ್ರಮಗಳ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಂದಾಪುರದಲ್ಲಿ ಜಿಲ್ಲಾಧಿಕಾರಿ  ಜಿ. ಜಗದೀಶ್ ಹೇಳಿಕೆ ನೀಡಿದ್ದಾರೆ.

Advertisement

ಕುಂದಾಪುರದ ವ್ಯಾಕ್ಸಿನೇಷನ್‌ ಕೇಂದ್ರಕ್ಕೆ ಭೇಟಿ ನೀಡಿ, ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಲಸಿಕೆ ವಿತರಣೆಯಲ್ಲಿ ಯಾವುದೇ ಗೊಂದಲ ಇಲ್ಲ.. ಗೊಂದಲ ನಿವಾರಣೆಗೆ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು.

ಉಡುಪಿ ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚು ಕೋವಿಡ್ ಕೇಸ್ ಗಳಿರುವ ಗ್ರಾಮಗಳನ್ನು ಐದು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು. ಇದು ಪರಿಣಾಮಕಾರಿಯಾಗಿದೆ. ಪಾಸಿಟಿವ್ ಪ್ರಕರಣಗಳು ಕಮ್ಮಿಯಾಗಿದೆ. ಜನರು ಕೂಡ  ಸ್ಪಂದಿಸಿದ್ದಾರೆ.  ಸರ್ಕಾರದ ನಿಯಮಗಳನ್ನು ಮೀರಲು ಯಾರಿಗೂ ಅವಕಾಶ ನಿಡುವುದಿಲ್ಲ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ 50 ಕ್ಕಿಂತ ಅಧಿಕ ಸೋಂಕಿತರಿರುವ 40 ಗ್ರಾಮ ಪಂಚಾಯತ್ ಸಂಪೂರ್ಣ ಲಾಕ್ ಡೌನ್ ಆಗಿತ್ತು.­

Advertisement

Udayavani is now on Telegram. Click here to join our channel and stay updated with the latest news.

Next