Advertisement

ನೇತ್ರ ತಜ್ಞ ಡಾ.ಶಿವರಾಮ ಕೆ.ವಿ. ಅವರಿಗೆ ಪ್ರತಿಷ್ಠಿತ “ಉತ್ಕೃಷ್ಟ ಸೇವಾ ಪ್ರಶಸ್ತಿ” ಪ್ರದಾನ

06:10 PM Dec 20, 2023 | Team Udayavani |

ಶಿರಸಿ: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನೇತ್ರ ತಜ್ಞ, ಪದ್ಮಶ್ರೀ ಡಾ. ಎಂ.ಎಂ.ಜೋಶಿ ಅವರ ಹೆಸರಿನಲ್ಲಿ ‌ನೀಡಲಾಗುವ ಪ್ರತಿಷ್ಠಿತ “ಉತ್ಕೃಷ್ಟ ಸೇವಾ ಪ್ರಶಸ್ತಿ”ಯನ್ನು ಹೆಸರಾಂತ ನೇತ್ರ ತಜ್ಞ ಶಿರಸಿ ಡಾ.ಶಿವರಾಮ ಕೆ.ವಿ. ಅವರಿಗೆ ಪ್ರದಾನ ಮಾಡಲಾಯಿತು.

Advertisement

ಹುಬ್ಬಳ್ಳಿಯ ಡಾ.ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಎರಡು ದಿನಗಳ ನೇತ್ರ ತಜ್ಞರ ಸಮ್ಮೇಳನ ʻಐ ಫೆಸ್ಟ್ʼ ನಲ್ಲಿ ಪ್ರಶಸ್ತಿ‌ ಪ್ರದಾನ‌ ಮಾಡಲಾಯಿತು.

ಕರ್ನಾಟಕ ನೇತ್ರ ತಜ್ಞರ ಸಂಘದ ಉಪಾಧ್ಯಕ್ಷರಾಗಿ ಈಚೆಗಷ್ಟೇ ಆಯ್ಕೆ ಆಗಿರುವ ಡಾ. ಶಿವರಾಮ ಅವರು ಶಿರಸಿಯಲ್ಲಿ ಗಣೇಶ‌ ನೇತ್ರಾಲಯದ ಮುಖ್ಯಸ್ಥರಾಗಿದ್ದಾರೆ. ನಯನ ಐ ಬ್ಯಾಂಕ್ ಕೂಡ ಸ್ಥಾಪಿಸಿ‌ ನೇತ್ರದಾನದ ಜಾಗೃತಿ‌ ಕೂಡ ಮಾಡುತ್ತಿದ್ದಾರೆ. ರೋಟರಿ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೂಡ ಸಕ್ರಿಯರಾಗಿರುವ ಅವರು, ಕದಂಬ ರತ್ನ, ಲಯನ್ಸ್‌ ಇಂಟರ್‌ ನ್ಯಾಶನಲ್ ಅವಾರ್ಡ್‌ ಸೇರಿದಂತೆ ಅನೇಕ ಪ್ರಶಸ್ತಿ ಗೌರವ ಸ್ವೀಕರಿಸಿದ್ದಾರೆ. ನಾಡಿನ ಬೆರಳೆಣಿಕೆಯ ಖ್ಯಾತ ನೇತ್ರ ಶಸ್ತ್ರ ಚಿಕಿತ್ಸಕರಲ್ಲಿ‌ ಇವರೂ ಒಬ್ಬರು ಎಂಬುದು ಉಲ್ಲೇಖನೀಯ.

ಇದನ್ನೂ ಓದಿ: Award; ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next