Advertisement

ಮಕ್ಕಳ ಚಲನಚಿತ್ರೋತ್ಸವ ಪ್ರದರ್ಶನಕ್ಕೆ ತೆರೆ

01:02 AM Jul 22, 2019 | Team Udayavani |

ಸುಳ್ಯ : ಬೆಂಗಳೂರು ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನಕಮಜಲು ಯುವಕ ಮಂಡಲದ ಆಶ್ರಯದಲ್ಲಿ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ರೈತಭವನದಲ್ಲಿ ಎರಡು ದಿನ ನಡೆದ ಮಕ್ಕಳ ಚಲನಚಿತ್ರೋತ್ಸವ ರವಿವಾರ ಸಮಾಪನಗೊಂಡಿತು.

Advertisement

ಸುಳ್ಯ, ಪುತ್ತೂರು ತಾಲೂಕಿನ ಆಯ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಜನಮನ್ನಣೆ ಗಳಿಸಿದ ಸಿನೆಮಾ ವೀಕ್ಷಿಸಿದರು. ಜು. 20ರಂದು ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು, ದಿ ರೆಡ್‌ ಬಲೂನ್‌, ಜು. 21ರಂದು ಕಾರಂತಜ್ಜನಿಗೊಂದು ಪತ್ರ, ರೈಲ್ವೆ ಚಿಲ್ಡ್ರನ್‌ ಚಲನಚಿತ್ರ ಪ್ರದರ್ಶನಗೊಂಡಿತು. ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ನಿರ್ದೇಶಕ ರಿಷಭ್‌ ಶೆಟ್ಟಿ, ಪಾತ್ರಧಾರಿಗಳಾದ ರಂಜನ್‌, ಸಪ್ತಾ ಪಾವೂರು, ಸನಿಲ್ಗುರು, ದಾನಿ ಲೋಹಿತ್‌ ಕುಮಾರ್‌ ಅವರನ್ನು ಯುವಕ ಮಂಡಲ ಪರವಾಗಿ ಸಮ್ಮಾನಿಸಲಾಯಿತು. ದಾಮೋದರ ಕಣಜಾಲು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next