Advertisement

ಬರೀ ಭಾಷಣದ ಬಿಜೆಪಿಯವರಿಂದ ಅಭಿವೃದ್ಧಿ ಆಗದು

04:41 PM May 05, 2018 | Team Udayavani |

ದಾವಣಗೆರೆ: ಬಿಜೆಪಿಯವರಿಗೆ ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವಾಗಿದ್ದು, ಬರೀ ಭಾಷಣ ಮಾಡಲು ಮಾತ್ರ ಅವರು ಲಾಯಕ್ಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ.

Advertisement

ಶುಕ್ರವಾರ ಬೇತೂರು, ರಾಂಪುರ, ನಾಗರಕಟ್ಟೆ, ಪುಟಗನಾಳು ಭಾಗದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ರೈತರಿಗೆ ಪ್ರಥಮ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಿದ್ದು ನಮ್ಮ ಸರ್ಕಾರ. ಈ ಸಾಲಿನಲ್ಲಿ ಒಟ್ಟಾರೆ 35 ಲಕ್ಷ ರೈತರಿಗೆ 13.5 ಸಾವಿರ ಕೋಟಿ ರೂ.ಸಾಲ ನೀಡುವ ಗುರಿ ಹೊಂದಿದ್ದು, ಗ್ರಾಮಗಳ ಉದ್ಧಾರ ಮತ್ತು ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಕಾಂಗ್ರೆಸ್‌ ಪಕ್ಷ
ಬೆಂಬಲಿಸಬೇಕು. ಬರೀ ಭಾಷಣ ಮಾಡುವ ಬಿಜೆಪಿಯವರನ್ನಲ್ಲ ಎಂದರು.

ಶೇ.3 ಬಡ್ಡಿ ದರದಲ್ಲಿ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡುವ ಜೊತೆಗೆ ರೈತರು ಸಹಕಾರಿ ಸಂಘಗಳಿಂದ ಪಡೆದಿರುವ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಲಾಗಿದೆ. 6.2 ಲಕ್ಷ ಎಕರೆ ಪ್ರದೇಶಕ್ಕೆ ಹೊಸದಾಗಿ ನೀರಾವರಿ ಸೌಲಭ್ಯ ಕಲ್ಪಿಸಿದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಅವರು ತಿಳಿಸಿದರು.

ಮಳೆ ವಂಚಿತ ಪ್ರದೇಶಗಳಿಗೆ ನೀರು, ಕೃಷಿ ಹೊಂಡ ನಿರ್ಮಾಣ, ಕೃಷಿ ಭಾಗ್ಯದಂತಹ ಯೋಜನೆಗಳಿಂದ 1 ಕೋಟಿ
ರೈತರಿಗೆ ಪ್ರಯೋಜನ ಕಲ್ಪಿಸಲಾಗಿದೆ. ಇಂತಹ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ನಮ್ಮ ಸರ್ಕಾರ ಕಳೆದ ಚುನಾವಣೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸುವ ಮೂಲಕ ಜನ ಮೆಚ್ಚುವಂತಹ ಕೆಲಸ ಮಾಡಿದೆ ಎಂದು ಅವರು ಹೇಳಿದರು.

ಬಿಜೆಪಿಯ ಪ್ರಧಾನಿಯಿಂದ ಹಿಡಿದು ಎಲ್ಲ ನಾಯಕರೂ ಬರೀ ಒಣ ಭಾಷಣ ಮಾಡುತ್ತಿದ್ದಾರೆಯೇ ವಿನಃ ರೈತರು ಮತ್ತು
ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಂತಹವರನ್ನು ನಂಬದೆ, ಅವರ ಆಮಿಷ, ಸುಳ್ಳು ಮಾತಿನ ಮೋಡಿಗೆ ಒಳಗಾಗದೆ ಸರ್ವರ ಹಿತ ಬಯಸುವಂತಹ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.

Advertisement

ಮುಖಂಡರಾದ ಬೇತೂರು ಕರಿಬಸಪ್ಪ, ರೇಣುಕಮ್ಮ ಕರಿಬಸಪ್ಪ, ಮುದೇಗೌಡ್ರು ಗಿರೀಶ್‌, ಮಾಗಾನಹಳ್ಳಿ ಪರಶುರಾಮ್‌, ಮೇಕಾ ಮುರುಳಿಕೃಷ್ಣ, ತಾಲ್ಲೂಕು ಪಂಚಾಯತ್‌ ಸದಸ್ಯೆ ಆಶಾ ಮುರುಳಿ, ಅಂಜಿಬಾಬು, ಬೂದಾಳ್‌ ಬಾಬು ಪ್ರಚಾರದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next