Advertisement

ಮೋದಿಗೆ ಸರಿಸಮನಾದ ವ್ಯಕ್ತಿ ಸಿಎಂ ಮಾತ್ರ: ಕನಕಪೀಠದ ಸ್ವಾಮೀಜಿ

03:40 PM Feb 09, 2018 | Team Udayavani |

ಹರಿಹರ: ‘ಪ್ರಧಾನಿ ಮೋದಿಗೆ ಸರಿಸಮಾನಾಗಿರುವ ವ್ಯಕ್ತಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ’ ಎಂದು ಕಾಗಿನೆಲೆ ಕನಕಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ. 

Advertisement

ಶುಕ್ರವಾರ ಬೆಳ್ಳೊಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ ‘ನಮ್ಮ ಹಾಲುಮತ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಆಗ ಸಿದ್ದರಾಮಯ್ಯ ಅವರು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಲು ಸಾಧ್ಯವಾಗುತ್ತದೆ’ ಎಂದರು. 

ಹರಿಹರ ಸಮೀಪದ ಬೆಳ್ಳೂಡಿ ಕಾಗಿನೆಲೆ ಮಠದಲ್ಲಿ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ರಜತ ಮಹೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಭಾಗಿಯಾಗಿದ್ದರು.

ನಮಗೆ ಇಡೀ ದೇಶವೆ ಟಾರ್ಗೆಟ್‌!
ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ ‘ಮೋದಿ ಅವರಿಗೆ ಕರ್ನಾಟಕ ಟಾರ್ಗೆಟ್‌ ಆದರೆ ನಮಗೆ ಇಡೀ ದೇಶವೆ ಟಾರ್ಗೆಟ್‌’ ಎಂದು ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿಕೆ ಹೊಸ ಚರ್ಚೆ ಹುಟ್ಟು ಹಾಕಿದ್ದು,ರಾಷ್ಟ್ರ ರಾಜಕಾರಣದತ್ತ ಸಿಎಂ ಹೊರಳಲಿದ್ದಾರೆಯೇ ಎನ್ನುವ ಚರ್ಚೆ ಆರಂಭವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next