Advertisement

ಹೆದರಿಸಲು ಮಾತ್ರ ಹೊರಟ್ಟಿ ಹೇಳಿಕೆ: ಶಿವಾನಂದ ಪಾಟೀಲ

12:32 AM May 20, 2019 | Team Udayavani |

ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ವಿಸರ್ಜಿಸಿ ಮಧ್ಯಂತರ ಚುನಾವಣೆ ನಡೆಸುವುದು ಸೂಕ್ತ ಎಂಬ ಎಂಎಲ್‌ಸಿ ಬಸವರಾಜ ಹೊರಟ್ಟಿ ಅವರ ಹೇಳಿಕೆ ಬೆದರಿಸಲು ಹೇಳಿದ್ದೇ ಹೊರತು ಸರ್ಕಾರ ಬೀಳಿಸಲು ಅಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಟ್ಟಿ ಆ ರೀತಿ ಏಕೆ ಹೇಳಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ವಿಸರ್ಜನೆಯಾಗಬೇಕು ಎಂಬ ಉದ್ದೇಶ ಅವರಿಗೂ ಇಲ್ಲ. ಯಾರಿಗೆ, ಯಾಕೆ ಬೆದರಿಸುವ ಉದ್ದೇಶದಿಂದ ಹೇಳಿದ್ದಾಗಿ ಹೊರಟ್ಟಿ ಹೇಳಿದ್ದಾರೆ.

ಹೀಗಾಗಿ, ಆ ಕುರಿತು ನಾನು ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಅಲ್ಲದೇ ಬಿಜೆಪಿಯವರು ಸರ್ಕಾರ ಬೀಳುತ್ತದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಅವರು ಸರ್ಕಾರ ಬೀಳಿಸಿದ ಮೇಲೆ ಹೇಳಿಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next