Advertisement

ಜಮ್ಮು ಕಾಶ್ಮೀರ ರಮ್ಜಾನ್‌ ಕದನ ವಿರಾಮ: 5 ದಿನದಲ್ಲಿ ಐದೇ ಕಲ್ಲೆಸೆತ

05:08 PM May 22, 2018 | Team Udayavani |

ಹೊಸದಿಲ್ಲಿ : ಪವಿತ್ರ ಉಪವಾಸ ಮಾಸ ರಮ್ಜಾನ್‌ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ನಿಲ್ಲಿಸಲಾದ ಮೊದಲ ಐದು ದಿನಗಳಲ್ಲಿ ಕೇವಲ ಐದು ಕಲ್ಲೆಸೆತದ ಪ್ರಕರಣಗಳು ನಡೆದಿರುವುದಾಗಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Advertisement

ಮೇ 17ರಿಂದ ಮೇ 21ವರೆಗಿನ ಐದು ದಿನಗಳಲ್ಲಿ  ಕೇವಲ 5 ಕಲ್ಲೆಸೆತ ಪ್ರಕರಣಗಳು ಘಟಿಸಿವೆ ಎಂದವರು ಹೇಳಿದ್ದಾರೆ.

ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಾದ ಈ ವರ್ಷ ಎಪ್ರಿಲ್‌ನ ಮೊದಲ ಐದು ದಿನಗಳಲ್ಲಿ 92 ಕಲ್ಲೆಸೆತದ ಪ್ರಕರಣಗಳು ಘಟಿಸಿದ್ದವು ಎಂದವರು ಹೇಳಿದರು.

ಜಮ್ಮು ಕಾಶ್ಮೀರದಲ್ಲಿನ ರಮ್ಜಾನ್‌ ಕದನ ವಿರಾಮ ಈ ದಿನದ ವರೆಗೆ ಯಶಸ್ವಿಯಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಎಸ್‌ ಪಿ ವೈದ್‌ ಹೇಳಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next