Advertisement

Online game ಸಾಲ: ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ

12:47 AM Aug 16, 2024 | Team Udayavani |

ಹಾಸನ: ಸಾಲಬಾಧೆಯಿಂದಾಗಿ ಕಾಣೆಯಾಗಿದ್ದ ಕುಟುಂಬದ ಮೂವರ ಮೃತದೇಹಗಳು ಚನ್ನರಾಯಪಟ್ಟಣದ ಬಾಗೂರು ಹೋಬಳಿ ಮದ್ಲಾಪುರ ಸಮೀಪದ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿವೆ. ಪಟ್ಟಣದ ಕೆರೆಬೀದಿ ನಿವಾಸಿ ಶ್ರೀನಿವಾಸ್‌ (43), ಪತ್ನಿ ಶ್ವೇತಾ (36) ಮತ್ತು ಪುತ್ರಿ ನಾಗಶ್ರೀ (13) ಮೃತಪಟ್ಟವರು. ಶ್ರೀನಿವಾಸ್‌ ಅವರಿಗೆ ಆನ್‌ಲೈನ್‌ಗೆàಮ್‌ನ ಚಟ ತಗಲಿದ್ದು, ಪತ್ನಿ ಮತ್ತು ತಾನು ದುಡಿದ ಹಣವನ್ನು ಅದರಲ್ಲಿ ಕಳೆದು ಕೊಂಡಿದ್ದರು.

Advertisement

ಜತೆಗೆ ಸ್ನೇಹಿತರು, ಸಂಬಂಧಿಕರಿಂದಲೂ ಸಾಲ ಪಡೆದುಕೊಂಡು ಅದನ್ನೂ ಕಳೆದುಕೊಂಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಪತ್ನಿ, ಪುತ್ರಿಯನ್ನು ಕರೆದುಕೊಂಡು ಹೋಗಿ ಒಟ್ಟಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸ್‌ ಕುಟುಂಬ ಸಮೇತ ಕಾಣೆಯಾಗಿರುವ ಬಗ್ಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿತ್ತು. ಗುರುವಾರ ನಾಲೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ನುಗ್ಗೇಹಳ್ಳಿ ಪೊಲೀಸರು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next