Advertisement

Online Fraud: 14 ಲ.ರೂ ಬಹುಮಾನ ನಂಬಿಸಿ ವಂಚನೆ

11:36 PM Jul 10, 2024 | Team Udayavani |

ಮಂಗಳೂರು: ಬಹುಮಾನ ಬಂದಿದೆ ಎಂಬುದಾಗಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ.

Advertisement

ಆ್ಯಪ್‌ವೊಂದರಲ್ಲಿ 14 ಲ. ರೂ. ಬಂದಿರುವುದಾಗಿ ದೂರುದಾರರಿಗೆ ಅಂಚೆ ಮುಖೇನ ಕೂಪನ್‌ ಬಂದಿತ್ತು, ಅದರಲ್ಲಿ 14.65 ಲ.ರೂ ಬಹುಮಾನ ಬಂದಿದೆ ಎಂದು ನಮೂದಿಸಲಾಗಿತ್ತು.

ಕೂಪನ್‌ನಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ದೂರುದಾರರ ಬ್ಯಾಂಕ್‌ ಮಾಹಿತಿ, ಗುರುತಿನ ಚೀಟಿಗಳನ್ನು ಕೇಳಿದ್ದ. ಅದರಂತೆ ದೂರುದಾರರು ವಾಟ್ಸಪ್‌ ಮೂಲಕ ಮಾಹಿತಿಗಳನ್ನು ರವಾನಿಸಿದ್ದರು. ಆ ಬಳಿಕ ನಗದು ಬಹುಮಾನ ಪಡೆಯಬೇಕಾದರೆ ನಾನಾ ತೆರಿಗೆ ಪಾವತಿಸಬೇಕೆಂದು ಆರೋಪಿಗಳು ಷರತ್ತು ಹಾಕಿದ್ದರು. ಅದರಂತೆ ದೂರುದಾರರು 6.65 ಲ. ರೂ. ಹಣವನ್ನು ಕಳುಹಿಸಿದ್ದರು. ಬಳಿಕ ಆರೋಪಿಗಳು ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ. ಈ ಬಗ್ಗೆ ಮಂಗಳೂರು ಸೈಬರ್‌ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next