Advertisement

ನಾಶಿಕ್‌ ರೈತರಿಗೆ ಬಂಪರ್‌ ಈರುಳ್ಳಿ:ಸಾಗಾಟಕ್ಕೆ ಹೆಚ್ಚುವರಿ ಸರಕು ರೈಲು

11:39 AM Feb 20, 2017 | udayavani editorial |

ಮುಂಬಯಿ: ಈರುಳ್ಳಿ ಬೆಳೆಯುವ ನಾಶಿಕ್‌ ರೈತರಿಗೆ ಈ ಬಾರಿ ಬಂಪರ್‌ ಬೆಳೆ ಕೈಗೆ ಬಂದಿದೆ. ಇದನ್ನು ತ್ವರಿತವಾಗಿ ಮಾರುಕಟ್ಟೆಗಳಿಗೆ ಸಾಗಿಸುವ ಮೂಲಕ ರೈತರಿಗೆ ನೆರವಾಗಲು ಭಾರತೀಯ ರೈಲ್ವೆ ಅತ್ಯಂತ ಸಕಾಲಿಕ ಕ್ರಮತೆಗೆದುಕೊಂಡಿದ್ದು ಆ  ನಿಟ್ಟಿನಲ್ಲಿ ಹೆಚ್ಚುವರಿ ಸರಕು ಸಾಗಣೆ ರೈಲನ್ನು ಇಂದು ಸೇವೆಗೆ ಇಳಿಸಿದೆ.

Advertisement

ನಾಶಿಕ್‌ನಲ್ಲಿ ರೈತರಿಗೆ ಒಲಿದಿರುವ ಬಂಪರ್‌ ಈರುಳ್ಳಿ ಬೆಳೆಯನ್ನು ಮಾರುಕಟ್ಟೆಗಳಿಗೆ ಸಾಗಿಸಲು ಸೆಂಟರ್‌ ರೈಲ್ವೇ ಈಗಾಗಲೇ ಮರು ಸರಕು ಸಾಗಣೆ ರೈಲುಗಳನ್ನು ಸೇವೆಗೆ ಒದಗಿಸಿದ್ದು ಇದೀಗ ಇನ್ನೂ ಒಂದು ಹೆಚ್ಚುವರಿ ರೈಲನ್ನು ಒದಗಿಸುವ ಇನ್ನೂ ಶೇ.30ರಷ್ಟು ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ಸಾಗಿಸುವುದು ಸುಲಭವಾಗಿದೆ.

ದೇಶದಲ್ಲಿ ಬೆಳೆಯಲಾಗುವ ಈರುಳ್ಳಿಯ ಶೇ.30ರಷ್ಟು  ಪ್ರಮಾಣವನ್ನು ನಾಶಿಕ್‌ನಲ್ಲೇ ಬೆಳೆಯಲಾಗುತ್ತದೆ. ಆದರೆ ಈರುಳ್ಳಿಯ ಬೆಲೆ ಈಚಿನ ದಿನಗಳಲ್ಲಿ ಬಂಪರ್‌ ಬೆಳೆಯಿಂದಾಗಿ ಗಮನಾರ್ಹವಾಗಿ ಕುಸಿದಿದೆ. ಆದರೂ ತ್ವರಿತ ಹಾಗೂ ಸಕಾಲಿಕ ಸಾಗಾಟ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸೆಂಟ್ರಲ್‌ ರೈಲ್ವೇ ನಾಶಿಕ್‌ ರೈತರಿಗೆ ನೆರವಾಗಿದೆ. 

ಅಂದ ಹಾಗೆ ಭಾರತೀಯ ರೈಲ್ವೆ ಈ ವರ್ಷ ಕಳೆದ ವರ್ಷಕ್ಕಿಂತ ಶೇ.50ರಷ್ಟು ಹೆಚ್ಚು ಸರಕನ್ನು ಸಾಗಿಸುತ್ತಿದೆ. ಸೌತ್‌ ಸೆಂಟ್ರಲ್‌ ರೈಲ್ವೆ ಮೂಲಕ ನಾಲ್ಕನೇ ಹೆಚ್ಚುವರಿ ಸರಕು ಸಾಗಣೆ ರೈಲನ್ನು (ಸೆಂಟ್ರಲ್‌ ರೈಲ್ವೇ ಈಗಾಗಲೇ ಮೂರನ್ನು ಒದಗಿಸಿದೆ) ಒದಗಿಸುವ ಇನ್ನೂ ಶೇ.30ರಷ್ಟು ಹೆಚ್ಚು ಈರುಳ್ಳಿಯನ್ನು ಸಾಗಿಸಲು ಸಾಧ್ಯವಾಗುವಂತೆ ಕೇಂದ್ರ ರೈಲ್ವೇ ಸಚಿವರು ನೀಡಿರುವ ಆದೇಶದ ಪ್ರಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ರೈಲ್ವೇ ಅಧಿಕಾರಿ ನರೇಂದ್ರ ಪಾಟೀಲ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next