Advertisement

Onion: ಈರುಳ್ಳಿ ರಫ್ತು ತೆರಿಗೆ- ಹರಾಜು ಸ್ಥಗಿತ

10:16 PM Aug 24, 2023 | Team Udayavani |

ನವದೆಹಲಿ: ಈರುಳ್ಳಿ ರಫ್ತಿನ ಮೇಲೆ ಶೇ.40ರ ತೆರಿಗೆ ವಿಧಿಸಿರುವ ಕೇಂದ್ರದ ನಿರ್ಣಯವನ್ನು ವಿರೋಧಿಸಿ ಮಹಾರಾಷ್ಟ್ರ ಹಾಗೂ ನಾಸಿಕ್‌ನ ಹಲವಾರು ಎಪಿಎಂಸಿ ಮಾರುಕಟ್ಟೆಗಳಲ್ಲಿ ಗುರುವಾರ ಈರುಳ್ಳಿ ಹರಾಜು ಪ್ರಕ್ರಿಯೆಯನ್ನು ಆರಂಭವಾಗುತ್ತಿದ್ದಂತೆಯೇ ಮತ್ತೆ ಸ್ಥಗಿತಗೊಳಿಸಲಾಗಿದೆ. ಸೋಮವಾರದಿಂದಲೂ ಹಲವಾರು ಎಪಿಎಂಸಿ ಮಾರುಕಟ್ಟೆಗಳ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಈ ನಡುವೆ ಗುರುವಾರವೂ ಅದೇ ಸ್ಥಿತಿ ಮುಂದುವರಿದಿದೆ.

Advertisement

ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆ ಲಸಲ್ಗಾಂವ್‌ ಹಾಗೂ ಪಿಂಪಲ್‌ಗಾಂವ್‌ ಮತ್ತು ಛಂದ್ವಾಡ್‌ನ‌ಲ್ಲಿ ಹರಾಜು ಆರಂಭಿಸಲಾಯಿತು. ಆದರೆ ಕೇಂದ್ರ ಮಾತುಕೊಟ್ಟಂತೆ ಕ್ವಿಂಟಾಲ್‌ಗೆ 2,410 ರೂ. ಬಾರದ ಹಿನ್ನೆಲೆ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿದೆ. ಇದರ ನಡುವೆ 500ಕ್ಕೂ ಅಧಿಕ ಈರುಳ್ಳಿ ಬೆಳೆಗಾರರು ಛಂದ್ವಾಡ್‌ನ‌ಲ್ಲಿ ರಫ್ತು ತೆರಿಗೆ ವಿರೋಧಿಸಿ ಪ್ರತಿಭಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next