Advertisement

‘ದೇಶದ ಪ್ರಜ್ವಲಿತ ರತ್ನಗಳಲ್ಲಿ ಒಬ್ಬರು’ – ಪ್ರಣಬ್ ದಾದಾಗೆ ಅಮುಲ್ ಶ್ರದ್ಧಾಂಜಲಿ

07:53 PM Sep 01, 2020 | Hari Prasad |

ಹೊಸದಿಲ್ಲಿ: ಸೋಮವಾರ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜೀ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಇಂದು ನಡೆದಿದೆ.

Advertisement

ಇತ್ತ ಪ್ರಣಬ್ ದಾ ಅವರ ನಿಧನಕ್ಕೆ ರಾಜಕೀಯ ರಂಗ ಮಾತ್ರವಲ್ಲದೇ ಎಲ್ಲಾ ರಂಗಗಳ ಗಣ್ಯರು ಮತ್ತು ಇತರರು ಕಂಬನಿ ಮಿಡಿದಿದ್ದಾರೆ.

ಭಾರತೀಯ ರಾಜಕೀಯ ಇತಿಹಾಸದ ಒಂದು ಬಹುದೊಡ್ಡ ಭಾಗವಾಗಿ ಪ್ರಣಬ್ ಅವರು ತಮ್ಮ ಛಾಪನ್ನು ಉಳಿಸಿ ಹೋಗಿದ್ದಾರೆ.

ಇತ್ತ ಪ್ರಣಬ್ ಅವರ ನಿಧನಕ್ಕೆ ದೇಶದ ಅತೀ ದೊಡ್ಡ ಡೈರಿ ಸಂಸ್ಥೆ ಅಮುಲ್ ವಿಭಿನ್ನವಾಗಿ ಕಂಬನಿ ಮಿಡಿದಿದೆ.

ತನ್ನ ಅಧಿಕೃತ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಈ ಕರಿತಾದ ಫೊಟೋ ಒಂದನ್ನು ಪ್ರಕಟಿಸಿರುವ ಅಮುಲ್, ಅಗಲಿದ ಹಿರಿಯ ರಾಜಕಾರಣಿಗೆ ಗೌರವಯುತ ಅಂತಿಮ ನಮನವನ್ನು ಸಲ್ಲಿಸಿದೆ.

Advertisement


ಅಮುಲ್ ಇಂದು ಪೋಸ್ಟ್ ಮಾಡಿರುವ ಈ ಫೊಟೋದಲ್ಲಿ ಪ್ರಣಬ್ ಅವರು ನಿಭಾಯಿಸಿದ ಮೂರು ಪ್ರಮುಖ ಹುದ್ದೆಗಳ ರೇಖಾ ಚಿತ್ರವನ್ನು ಬಿಡಿಸಲಾಗಿದ್ದು, ಹಿನ್ನಲೆಯಲ್ಲಿ ಸಂಸತ್ ಭವನ ಮತ್ತು ‘ಭಾರತ ರತ್ನ’ದ ಚಿತ್ರವಿದೆ . ಮತ್ತು ‘ಭಾರತ ಪ್ರಜ್ವಲಿತ ರತ್ನಗಳಲ್ಲಿ ಒಬ್ಬರಾದ ನಿಮಗೆ ವಿದಾಯ..’ ಎಂದು ಬರೆಯಲಾಗಿದೆ. ಮತ್ತು ಕೆಳಗೆ ‘ಪ್ರಣಬ್ ಮುಖರ್ಜಿ 1935 – 2020’ ಎಂದು ಬರೆದು ಈ ಮಹಾನ್ ನಾಯಕನಿಗೆ ಭಾವಪೂರ್ಣ ಅಂತಿಮ ನಮನವನ್ನು ಸಲ್ಲಿಸಲಾಗಿದೆ.

ಅಮುಲ್ ತನ್ನ ಅಧಿಕೃತ ತಾಣಗಳಲ್ಲಿ ಇದನ್ನು ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಇದಕ್ಕೆ ಪುರಕವಾಗಿ ಸ್ಪಂದಿಸಿ ತಮ್ಮ ಶ್ರದ್ಧಾಂಜಲಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ 8000+ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು 924 ಬಾರಿ ರಿಟ್ವೀಟ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next