Advertisement

ನೆರೆ ಸಂತ್ರಸ್ತರಿಗೆ ಒಂದು ಲಕ್ಷ ಪರಿಹಾರ ವಿತರಣೆ

03:03 PM Oct 13, 2019 | Team Udayavani |

ಶ್ರೀರಂಗಪಟ್ಟಣ: ತಾಲೂಕಿನ ನೆಲಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರಾಜ್ಯದಲ್ಲಿ ಪ್ರವಾಹ ಪೀಡಿತರಿಗೆ ಸಹಾಯರ್ಥವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. ಚೆಕ್ಕನ್ನು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌ಗೆ ನೀಡಿದರು. ತಾಲೂಕಿನ ಕೂಡಲಕುಪ್ಪೆ, ಹನುಮಂತನಗರ,

Advertisement

ಕೆಂಪೇಗೌಡನಕೊಪ್ಪಲು ಹಾಗೂ ನೆಲಮನೆ ಗ್ರಾಮಗಳ ವ್ಯಾಪ್ತಿಯ ನೆಲಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಶೇರುದಾರರ ಮೂಲಕ ಚರ್ಚೆ ನಡೆಸಿ ದೇಣಿಗೆಯಾಗಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಒಂದು ಲಕ್ಷದ ಚೆಕ್‌ ನೀಡಿರುವುದಾಗಿ ಸಂಘದ ಅಧ್ಯಕ್ಷ ಎನ್‌.ಸಿ.ಶ್ರೀನಿವಾಸ್‌ ತಿಳಿಸಿದರು.

ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ನಾರಾಯಣ, ನಿರ್ದೇಶಕರಾದ ಡಿ.ನರಸಿಂಹೇಗೌಡ, ವೈ.ನಾರಾಯಣ, ಎನ್‌.ಬಾಬು, ರಾಮೇಗೌಡ, ಅರುಣಾಕ್ಷಿ, ಸುರೇಂದ್ರ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next