Advertisement

ಶಿವಮೊಗ್ಗದಲ್ಲಿ ಒಂದು ಲಕ್ಷ ಲಡ್ಡು ವಿತರಣೆ

12:05 AM May 31, 2019 | Team Udayavani |

ಶಿವಮೊಗ್ಗ: ಮೋದಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಗರದ ಪ್ರತಿಮನೆಗೂ ಲಡ್ಡು ಹಂಚಲಾಯಿತು. ನಗರದ ಶಿವಪ್ಪ ನಾಯಕ ಸರ್ಕಲ್‌ನಿಂದ ಸಿಹಿ ಹಂಚುವ ಕಾರ್ಯಕ್ರಮಕ್ಕೆ ಶಾಸಕ ಕೆ.ಎಸ್‌.ಈಶ್ವರಪ್ಪ ಚಾಲನೆ ನೀಡಿದರು.

Advertisement

ಹೂವಿನ ಮಾರುಕಟ್ಟೆ, ಗಾಂಧಿ ಬಜಾರ್‌ ರಸ್ತೆಯಲ್ಲಿ ಖುದ್ದು ತೆರಳಿ ಸಿಹಿ ಹಂಚಿದರು. 1 ಲಕ್ಷಕ್ಕೂ ಹೆಚ್ಚು ಲಡ್ಡನ್ನು ಈ ದಿನ ವಿತರಿಸಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ  ಸ್ವೀಕರಿಸುವ ಕಾರ್ಯಕ್ರಮವನ್ನು ಜನ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಇಂದು ಇಡೀ ದೇಶದಲ್ಲಿ ಹಬ್ಬದ ವಾತಾವರಣವಿದೆ. ಹೀಗಾಗಿ, ಶಿವಮೊಗ್ಗದ 300 ಬೂತ್‌ಗಳ ವ್ಯಾಪ್ತಿಯ ಎಲ್ಲ ಮನೆಗಳಿಗೂ ಸಿಹಿ ಹಂಚುತ್ತಿದೇವೆ. ಶಿವಮೊಗ್ಗದ ಒಂದು ಲಕ್ಷ ಮನೆಗಳಿಗೆ ಲಡ್ಡು ಹಂಚುತ್ತಿದ್ದೇವೆ. ನಾವು ಕರ್ನಾಟಕದಲ್ಲಿ 22 ಲೋಕಸಭಾ ಕ್ಷೇತ್ರ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಆದರೆ, ಜನ ನಮ್ಮನ್ನು 25 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಜನರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
-ಈಶ್ವರಪ್ಪ

ಮೋದಿ ಮತ್ತೆ ಪ್ರಧಾನಿಯಾಗುವುದು ನನಗೆ ಅತ್ಯಂತ ಖುಷಿ ತಂದಿದೆ. ಅವರ ಆಡಳಿತದಲ್ಲಿ ಯಾವುದೇ ವಿಘ್ನಗಳು ಸಂಭವಿಸದಂತೆ ಕೊಟ್ಟೂರೇಶ್ವರ ಕರುಣಿಸಲಿ ಎಂದು ಹರಕೆ ಹೊತ್ತು ಈ ಸೇವೆ ಸಲ್ಲಿಸಿದ್ದೇನೆ.
-ರಾಜಶೇಖರ್‌, ಮೋದಿ ಅಭಿಮಾನಿ

Advertisement

Udayavani is now on Telegram. Click here to join our channel and stay updated with the latest news.

Next