Advertisement

ಒಂದು ಜಿಲ್ಲೆ ಒಂದು ಉತ್ಪನ್ನ; ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಾಗರೋತ್ಪನ್ನ

12:13 AM Oct 09, 2020 | mahesh |

ದಾವಣಗೆರೆ: ಆತ್ಮನಿರ್ಭರ ಯೋಜನೆಗೆ ಬಲ ನೀಡುವ “ಒಂದು ಜಿಲ್ಲೆ, ಒಂದು ಉತ್ಪನ್ನ’ ಕಾರ್ಯಕ್ರಮಕ್ಕಾಗಿ ರಾಜ್ಯದ ಒಂದೊಂದು ಜಿಲ್ಲೆಗೂ ಒಂದೊಂದು ಉತ್ಪನ್ನವನ್ನು ಗುರುತಿಸಲಾಗಿದೆ. ಆಯಾ ಜಿಲ್ಲೆಯ ವೈವಿಧ್ಯ ಅಥವಾ ಅಲ್ಲಿನ ಪ್ರಮುಖ ಕಸುಬನ್ನೇ ಇದಕ್ಕಾಗಿ ಆಯ್ದುಕೊಳ್ಳಲಾಗಿದೆ.

Advertisement

ಇದನ್ನು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮ ಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್‌ಎಂಇ)ಯಡಿ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಸಂಬಂಧ ಕ್ರಿಯಾ ಯೋಜನೆ ತಯಾರಿ ಭರದಿಂದ ಸಾಗಿದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉತ್ಪನ್ನ ಮತ್ತು ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ನಿರ್ದಿಷ್ಟ ಸಂಸ್ಥೆ ಮತ್ತು ಇಲಾಖೆಗೆ ವಹಿಸಲಾಗಿದೆ.

ಆತ್ಮನಿರ್ಭರ ಯೋಜನೆಯಡಿ “ಒಂದು ಜಿಲ್ಲೆ- ಒಂದು ಉತ್ಪನ್ನ’ ಪರಿಕಲ್ಪನೆಯಂತೆ ಜಿಲ್ಲೆಗೊಂದು ವಿಶಿಷ್ಟ ಉತ್ಪನ್ನ ವಲಯ ಗುರುತಿಸುವ ಕಾರ್ಯ ನಡೆದಿದೆ.
– ಗೌರವ್‌ ಗುಪ್ತ , ವಾಣಿಜ್ಯ, ಕೈಗಾರಿಕಾ ಇಲಾಖೆ ಪ್ರ. ಕಾರ್ಯದರ್ಶಿ


ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next