Advertisement

Terdal ಅಕ್ರಮ ಗಾಂಜಾ ಮಾರಾಟ ಓರ್ವನ ಬಂಧನ

08:28 PM Oct 29, 2023 | Team Udayavani |

ರಬಕವಿ ಬನಹಟ್ಟಿ (ತೇರದಾಳ) : ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಬಂದಿಸಿದ ಘಟನೆ ತೇರದಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ದ್ವಿಚಕ್ರ ವಾಹನ ಮೇಲೆ ಹೊರಟಿದ್ದ ವ್ಯಕ್ತಿಯನ್ನು ತೇರದಾಳ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಅಂದಾಜು ಐದು ಸಾವಿರ ಮೌಲ್ಯದ ಒಂದು ಕೆಜಿ ಹಸಿ ಗಾಂಜಾ ಹಾಗೂ ಇಪ್ಪತ್ತು ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ನೆರೆಯ ರಾಯಬಾಗ ತಾಲೂಕಿನ ಪಾಲಬಾವಿ ಗ್ರಾಮದ ಸಂತೋಷ ಪರಪ್ಪ ಖಾನಗೌಡರ(29) ಬಂಧಿತ ಆರೋಪಿ.

ತೇರದಾಳ ಪಾಲಬಾವಿ ರಸ್ತೆಯ ಹನುಮಾನ ದೇವಸ್ಥಾನ ಬಳಿ ಬೈಕ್ ಮೇಲೆ ಸಂಶಾಸ್ಪದವಾಗಿ ಬರುತ್ತಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿ ಅಪ್ಪು ಐಗಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡಲು ಹೊರಟಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next