Advertisement
ನಿರ್ಮಾಣ ಹಂತದ ಸೇತುವೆಯೇ ಆಸರೆಹಳೆಯ ಸೇತುವೆ ಮುಳುಗಡೆಯಾಗಿರುವುದರಿಂದ ಹೆಚ್ಚಿನ ಜನರು ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಮೇಲೆ ನಡೆದುಕೊಂಡು ಹೋಗುವ ಮೂಲಕ ಹೊಳೆ ದಾಟುತ್ತಿದ್ದಾರೆ. ಸಂಪರ್ಕ ರಸ್ತೆಯ ಕಾಮಗಾರಿ ಪೂರ್ತಿಯಾಗದೇ ಇರುವುದರಿಂದ ಹೊಸ ಸೇತುವೆಯ ಮೇಲೆ ವಾಹನ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಆದರೂ ಕೆಲ ದ್ವಿಚಕ್ರ ವಾಹನ ಸವಾರರು ಕಷ್ಟಪಟ್ಟು ಹೊಸ ಸೇತುವೆಯ ಮೇಲೆ ತಮ್ಮ ವಾಹನಗಳನ್ನು ದಾಟಿಸುತ್ತಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಮೇಲೆ ವಾಹನಗಳನ್ನು ಹತ್ತಿಸಲು ಕಷ್ಟವಾಗುತ್ತಿದ್ದ ಕಾರಣದಿಂದಾಗಿ ಸ್ಥಳೀಯ ವ್ಯಕ್ತಿಯೊಬ್ಬರು ಹಲಗೆಯೊಂದನ್ನು ಇಟ್ಟು ಮಳೆ, ಕೆಸರು ಎನ್ನದೇ ಜನರಿಗೆ ಬೈಕ್ ದಾಟಿಸಲು ಸಹಕರಿಸುತ್ತಿದ್ದರು. ಜನರು ಸಂತೋಷದಿಂದ ಅಲ್ಪ ಮೊತ್ತ ನೀಡುತ್ತಿದ್ದರು. ಆದರೆ ಕೆಲ ವಿಘ್ನ ಸಂತೋಷಿಗಳು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಹೊಸ ಸೇತುವೆಯ ಮೇಲೆ ದ್ವಿಚಕ್ರ ವಾಹನ ಹೋಗಲು ಪೊಲೀಸರ ಎದುರೇ ದುಡ್ಡು ಕೀಳಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದ್ದರಿಂದ ಆ ಸೇವೆಯೂ ಸ್ಥಗಿತವಾಗಿದೆ.