Advertisement

ಇಂದು ಕೊಲೀಜಿಯಂ ಸಭೆ

11:05 AM May 11, 2018 | Team Udayavani |

ಹೊಸದಿಲ್ಲಿ: ಉತ್ತರಾಖಂಡ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲು ಶುಕ್ರವಾರ ಕೊಲೀಜಿಯಂ (ನ್ಯಾಯ ಮೂರ್ತಿಗಳ ಸಮಿತಿ) ಸಭೆ ನಡೆಯಲಿದೆ. ಅದರಲ್ಲಿ ನ್ಯಾ| ಜೋಸೆಫ್ ಹೆಸರನ್ನು ಮತ್ತೂಮ್ಮೆ ಅಂತಿಮಪಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸುವ ಸಾಧ್ಯತೆ ಇದೆ. ಈ ಬಗ್ಗೆ  ಅಧಿಕೃತ ಮಾಹಿತಿ ಇರದೇ ಇದ್ದರೂ, ಸಮಿತಿ ಸದಸ್ಯರು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.

Advertisement

ನ್ಯಾ| ಜೋಸೆಫ್ ಹೆಸರನ್ನು ನ್ಯಾಯಮೂರ್ತಿಯಾಗಿ ಅಂಗೀಕರಿಸಬೇಕು. ಈ ಬಗ್ಗೆ ತುರ್ತಾಗಿ ಕೊಲೀಜಿಯಂ ಸಭೆ ನಡೆಯಬೇಕು ಎಂದು ಸಮಿತಿ ಸದಸ್ಯ ನ್ಯಾ| ಜೆ.ಚಲಮೇಶ್ವರ್‌ ಬುಧವಾರ ಮುಖ್ಯನ್ಯಾಯಮೂರ್ತಿ ದೀಪಕ್‌ಮಿಶ್ರಾಗೆ ಪತ್ರ ಬರೆದಿದ್ದರು.  ಜ.10ರಂದು ನ್ಯಾ| ಜೋಸೆಫ್ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿದ ಬಳಿಕದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ಅವರನ್ನೇ ಪರಿಗಣಿಸಬೇಕು ಎಂದು ಪತ್ರದಲ್ಲಿ ಬರೆದ್ದರು.

ಎ.26ರಂದು ನಡೆದಿದ್ದ ಬೆಳವಣಿಗೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ನ್ಯಾ| ಜೋಸೆಫ್ ಹೆಸರನ್ನು ಮತ್ತೂಮ್ಮೆ ಪರಿಶೀಲಿಸುವಂತೆ ಕೋರಿ ಪತ್ರ ಬರೆದಿದ್ದರು. ಜೋಸೆಫ್ ಹೆಸರನ್ನು ಅಂತಿಮಪಡಿಸಿದರೆ ಕೇರಳಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಅವರಿಗಿಂತ ಹಿರಿಯ ನ್ಯಾಯಮೂರ್ತಿಗಳೂ ಇದ್ದಾರೆ ಎಂದು ಸಚಿವರು ಉಲ್ಲೇಖಿಸಿದ್ದರು. ನ್ಯಾ| ಜೆ.ಚಲಮೇಶ್ವರ್‌ ತಮ್ಮ ಪತ್ರದಲ್ಲಿ ಸಚಿವ ರವಿಶಂಕರ ಪ್ರಸಾದ್‌ ಪ್ರಸ್ತಾವಿಸಿರುವ ಅಂಶಗಳಿಗೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next