Advertisement

ಉದ್ಯಾವರ: ಸೇತುವೆಗೆ ಢಿಕ್ಕಿ ಹೊಡೆದು ಆಮ್ನಿ ಕಾರು ಪಲ್ಟಿ

09:29 AM Jun 17, 2019 | keerthan |

ಕಾಪು: ಟಯರ್‌ ಸ್ಫೋಟಗೊಂಡ ಪರಿಣಾಮ ಮಾರುತಿ ಆಮ್ನಿ ಕಾರೊಂದು ಸೇತುವೆ ಬದಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರವಿವಾರ ಬೆಳಗ್ಗೆ ಉದ್ಯಾವರದಲ್ಲಿ ಸಂಭವಿಸಿದೆ.

Advertisement

ಸುರತ್ಕಲ್‌ನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಆಮ್ನಿ ಕಾರಿನ ಟಯರ್‌ ಸೇತುವೆ ಮಧ್ಯದಲ್ಲೇ ಸ್ಫೋಟಗೊಂಡು, ಸೇತುವೆ ಬದಿಗೆ ಢಿಕ್ಕಿ ಹೊಡೆದು ಹೆದ್ದಾರಿಯಲ್ಲೇ ಮಗುಚಿ ಬಿದ್ದಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಅದರಲ್ಲಿದ್ದ ಸುರತ್ಕಲ್‌ ನಿವಾಸಿಗಳಾದ ಚಾಲಕ ಅಬ್ದುಲ್‌ ಖಾದರ್‌, ಮಹಮ್ಮದ್‌ ಅಸರ್‌, ಪುತ್ತುಂಜಿ ಮತ್ತು ಮಹಮ್ಮದ್‌ ಶಾಕಿಬ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳೀಯರು ಮತ್ತು ಪೊಲೀಸರು ಧಾವಿಸಿ ಸಂಚಾರ ಸುಗಮಗೊಳಿಸಿದರು. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next