Advertisement

ಒಂಭತ್ತನೇ ದಿಕ್ಕು ಮುಗಿಯಿತು

10:03 AM Dec 18, 2019 | Lakshmi GovindaRaj |

ದಯಾಳ್‌ ಪದ್ಮನಾಭನ್‌ ನಿರ್ದೇಶನದ “ಒಂಭತ್ತನೇ ದಿಕ್ಕು’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ರೀರೆಕಾರ್ಡಿಂಗ್‌ ಸಹ ಪೂರ್ಣವಾಗಿದೆ. ಅವಿನಾಶ್‌ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ನಿತಿನ್‌ ಅವರು ಬರೆದಿರುವ ಕಥೆಗೆ ವೆಂಕಟ್‌ ದೇವ್‌, ಅಭಿಷೇಕ್‌.ಎಸ್‌.ಎನ್‌ ಹಾಗೂ ದಯಾಳ್‌ ಪದ್ಮನಾಭನ್‌ ಸಂಭಾಷಣೆ ಬರೆದಿದ್ದಾರೆ.

Advertisement

ರಾಕೇಶ್‌ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಅವರ ಸಂಗೀತ ನಿರ್ದೇಶನವಿದೆ. ಪ್ರೀತಿ ಮೋಹನ್‌ ಸಂಕಲನ, ವಿಕ್ರಂ ಮೋರ್‌ ಸಾಹಸ ಹಾಗೂ ಮುರಳಿ ಅವರ ನೃತ್ಯ ಈ ಚಿತ್ರಕ್ಕಿದೆ. ಲೂಸ್‌ ಮಾದ ಯೋಗಿ, ಅದಿತಿ ಪ್ರಭುದೇವ, ಸಂಪತ್‌ ಕುಮಾರ್‌, ಸಾಯಿಕುಮಾರ್‌, ಅಶೋಕ್‌, ರಮೇಶ್‌ ಭಟ್‌, ಪ್ರಶಾಂತ್‌ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next