Advertisement

ಉದ್ದೀಪನ ಬಲೆಯಲ್ಲಿ ಕುಸ್ತಿಪಟು ಸುಮಿತ್‌ : ಭಾರತದ ಕುಸ್ತಿಗೆ ಇನ್ನೊಂದು ಕಳಂಕ

10:41 PM Jun 04, 2021 | Team Udayavani |

ಹೊಸದಿಲ್ಲಿ : ಭಾರತದ ಕುಸ್ತಿಗೆ ಇನ್ನೊಂದು ಕಳಂಕ ತಟ್ಟಿದೆ. ಸುಶೀಲ್‌ ಕುಮಾರ್‌ ಕೊಲೆ ಆರೋಪದಲ್ಲಿ ಜೈಲು ಪಾಲಾದ ಬಳಿಕ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದ ಸುಮಿತ್‌ ಮಲಿಕ್‌ ಉದ್ದೀಪನ ಬಲೆಗೆ ಬಿದ್ದು ಅಮಾನತು ಗೊಂಡಿದ್ದಾರೆ.

Advertisement

ಬಲ್ಗೇರಿಯಾದಲ್ಲಿ ಇತ್ತೀಚೆಗೆ ನಡೆದ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳ “ಸ್ಯಾಂಪಲ್‌’ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಸುಮಿತ್‌ ಮಲಿಕ್‌ ಅವರ ಸ್ಯಾಂಪಲ್‌ನಲ್ಲಿ ಉದ್ದೀಪನ ಅಂಶ ಕಂಡು ಬಂದಿದೆ. “ಯುನೈಟೆಡ್‌ ವರ್ಲ್ಡ್ ರೆಸ್ಲಿಂಗ್‌’ ಈ ಮಾಹಿತಿಯನ್ನು ರೆಸ್ಲಿಂಗ್‌ ಫೆಡರೇಶನ್‌ ಆಫ್ ಇಂಡಿಯಾಕ್ಕೆ ತಿಳಿಸಿದೆ.

ರಿಯೋ ಅವಮಾನ
ಇದರಿಂದ ಸತತ ಎರಡು ಒಲಿಂಪಿಕ್ಸ್‌ ಪಂದ್ಯಾವಳಿಗೂ ಮುನ್ನ ಭಾರತದ ಕುಸ್ತಿಪಟುಗಳು ಇಂಥ ಅವಮಾನಕ್ಕೆ ಸಿಲುಕಿದಂತಾಯಿತು. 2016ರ ರಿಯೋ ಕೂಟಕ್ಕೂ ಮೊದಲು ನರಸಿಂಗ್‌ ಪಂಚಮ್‌ ಯಾದವ್‌ ಇದೇ ಕಳಂಕ ಮೆತ್ತಿಕೊಂಡು 4 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next