Advertisement

ಚಿಕ್ಕಮಗಳೂರು : ವೇದಾವತಿ ನದಿ ಆರ್ಭಟಕ್ಕೆ ಕೊಚ್ಚಿ ಹೋದ ವೃದ್ದೆ

09:57 AM Oct 25, 2019 | sudhir |

ಚಿಕ್ಕಮಗಳೂರು ; ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಜಿಲ್ಲೆಯ ವೇದಾವತಿ ನದಿಯಲ್ಲಿ ವೃದ್ಧೆಯೊಬ್ಬರು ಕೊಚ್ಚಿ ಹೋದ ಘಟನೆ ಕಡೂರು ತಾಲೂಕಿನ ಮಲ್ಲಿದೇವಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

Advertisement

ಕಡೂರು ತಾಲೂಕಿನ ಮಲ್ಲಿದೇವಿಹಳ್ಳಿಯ ನಿವಾಸಿಯಾದ ಕರಿಯಮ್ಮ 70 ಮೃತ ವೃದ್ದೆ.

ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ವೇದಾವತಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಬಯಲುಸೀಮೆ ಭಾಗಕ್ಕೆ ಹರಿದು ಬಂದ ನೀರನ್ನು ನೋಡಲು ಹೋಗಿದ್ದ ವೇಳೆ ವೃದ್ದೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next