Advertisement

ಪೊಲೀಸರಿಂದ ಮೋಸ ಆರೋಪ: ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ

10:55 AM Mar 18, 2022 | Team Udayavani |

ಬೆಂಗಳೂರು: ಜಮೀನು ಮಾರಾಟ ವಿಚಾರದಲ್ಲಿ ಮೋಸವಾಗಿದೆ, ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ ವೃದ್ಧರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಆರ್ ಟಿ ನಗರ ನಿವಾಸದಲ್ಲಿ ಸಿಎಂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಸುಂಕದಕಟ್ಟೆಯ ಚಂದ್ರಶೇಖರ್ ಎಂಬವರು ಸಿಎಂ ಎದುರೇ ಬಾಟಲಿಯಲ್ಲಿ ಯಾವುದೋ ದ್ರಾವ ಸೇವಿಸಲು ಯತ್ನಿಸಿದರು. ಕೂಡಲೇ ತಡೆದ ಪೊಲೀಸರು ಅವರನ್ನು ಸ್ವಲ್ಪ ದೂರ ಕೊಂಡೊಯ್ದು ವಿಚಾರಣೆ ನಡೆಸಿದರು.

ಪೊಲೀಸರು ಕೆಲವರ ಜತೆ ಸೇರಿ ಸೈಟ್ ಮಾರಾಟದಲ್ಲಿ ಮೋಸ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್‌ ವಿರುದ್ಧ ಆರೋಪ ಮಾಡಿದ ಅವರುನ್ಯಾಯ ಕೊಡಿ ಎಂದು ಸಿಎಂ ಎದುರು ಅಳಲು ತೋಡಿಕೊಂಡರು.

ಇದನ್ನೂ ಓದಿ:ರಷ್ಯಾ, ಉಕ್ರೇನ್ ಯುದ್ಧ ಅಂತ್ಯಗೊಳಿಸಲು ರಾಜತಾಂತ್ರಿಕ ಮಧ್ಯಸ್ಥಿಕೆಗೆ ಸಿದ್ಧ: ಭಾರತ

ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ ಮೋಸವಾಗಿದೆ. ಪೊಲೀಸರೂ ಶಾಮೀಲಾಗಿ ಮೋಸ ಮಾಡಿದ್ದಾರೆಂದು ಆರೋಪಿಸಿದರು. ವೃದ್ಧ ಚಂದ್ರಶೇಖರ್ ಈ ಹಿಂದೆಯೂ‌ ಸಿಎಂಗೆ ದೂರು ಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next